



ಬಂಟ್ವಾಳ: ಅನಾರೋಗ್ಯದಿಂದ ಬಳಲುತ್ತಿದ್ದ ಬಂಟ್ವಾಳ ತಾ.ನ ಸಜೀಪಮುನ್ನೂರು ಗ್ರಾಮದ ಶಾರದ ನಗರ ನಿವಾಸಿ ರಾಮಯ್ಯ ಭಂಡಾರಿ ಅವರ ಕುಟುಂಬಕ್ಕೆ ಆರೋಗ್ಯದ ವೆಚ್ಚಕ್ಕಾಗಿ ಸಜೀಪಜನ ಸೇವಾ ಟ್ರಸ್ಟ್ ವತಿಯಿಂದ ಸಹಾಯಧನದ ಚೆಕ್ಕನ್ನು ಹಸ್ತಾಂತರಿಸಲಾಯಿತು. ಟ್ರಸ್ಟ್ ನ ಅಧ್ಯಕ್ಷ ಯಶವಂತ ದೇರಾಜೆ, ಸ್ಥಳೀಯ ಪ್ರಮುಖರಾದ ಎo. ಸುಬ್ರಮಣ್ಯ ಭಟ್, ವಿಶ್ವನಾಥ್ ಬೆಲ್ಚಡ, ಕೆ. ಪ್ರಶಾಂತ್ ಕಂದೂರು, ನವೀನ್ ಪೂಜಾರಿ, ಪರಮೇಶ್ವರ, ಸತೀಶ್ ಪೂಜಾರಿ, ಸುರೇಶ್ ಬಂಗೇರ ಮೊದಲಾದವರಿದ್ದರು.





