ಅಳದಂಗಡಿ: ಅಜಿಲ ಸೀಮೆಯ ಅಳದಂಗಡಿ ಅರಮನೆಗೆ ಸಂಬಂಧಪಟ್ಟ ಬಹಳ ಪುರಾತನವಾದ ಅರ್ಕಿಜೆ ಬಳಿ ಮುಜುಲ್ನಾಯ ಬೊಟ್ಟದ ಗುಡ್ಡೆಯಲ್ಲಿ ಸುಮಾರು 400 ಸಸಿಗಳನ್ನು ನೆಡುವ ವನಮಹೋತ್ಸವ ಕಾರ್ಯಕ್ರಮಕ್ಕೆ ಶಾಸಕ ಹರೀಶ್ ಪೂಂಜ ಚಾಲನೆಯನ್ನು ನೀಡಿದರು.
ಈ ಸಂಧರ್ಭದಲ್ಲಿ ಶಾಸಕರು ಪಾಳು ಬಿದ್ದ ಪುರಾತನ ನಾಗನ ಬನ, ಮುಜುಲ್ನಾಯ ದೈವಸ್ಥಾನ, ಹಳೆಯದಾದ ಕೇದಗೆ ಕೆರೆಯನ್ನು ವೀಕ್ಷಿಸಿದರು.
ಈ ಸಂಧರ್ಭದಲ್ಲಿ ಶಿವ ಪ್ರಸಾದ್ ಅಜಿಲರು, ಅಕ್ಷಯ್ ರಾಜ್, ಚಾವಡಿ ನಾಯಕ ರಾಜಶೇಖರ್ ಶೆಟ್ಟಿ, ಗುರಿಕಾರದ ಕೊರಗಪ್ಪ ಕೋಡಿಬಾಳೆ, ಮೆನ್ಪ, ರಾಮಣ್ಣ, ಗ್ರಾ.ಪಂ ಸದಸ್ಯರಾದ ಸದಾನಂದ ಪೂಜಾರಿ ಉಂಗಿಲಬೈಲ್ ಲಲಿತ ಆಲಡ್ಕ, ಹಿಂದೂ ಯುವ ಶಕ್ತಿ ವಾಟ್ಸಪ್ ಗ್ರೂಪ್ ನ ಸದಸ್ಯರು, ಸತ್ಯದೇವತೆ ಸ್ಪೋರ್ಟ್ಸ್ ಕ್ಲಬ್ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.