ಬಂಟ್ವಾಳ: ತಾಲೂಕಿನ ವಾಮದಪದವಿನಲ್ಲಿ ಕೆನರಾ ಬ್ಯಾಂಕ್ ಇದ್ದು, ಇಲ್ಲಿ ಯಾವಾಗಲೂ ಜನ ದಟ್ಟನೆ ಇರುವುದರಿಂದ ಇಲ್ಲಿನ ಜನರು ಸಿದ್ದಕಟ್ಟೆ, ಸೊನಾ೯ಡು, ವಗ್ಗ, ಪುಂಜಾಲಕಟ್ಟೆಗೆ ಹೋಗುವ ಪರಿಸ್ಥಿತಿ ಇದೆ. ವಯಸ್ಕರು ಬೆಳಿಗ್ಗೆ ಹೋಗಿ ಕ್ಯೂನಲ್ಲಿ ನಿಂತರೆ ಹಿಂದುರುಗುವಾಗ ಮಧ್ಯಾಹ್ನ ಅಗಿದಂತಹ ಪರಿಸ್ಥಿತಿಯೂ ಇದೆ. ಅದಲ್ಲದೇ ವಾರದಲ್ಲಿ 4 ದಿನ ಎ.ಟಿ.ಎಂ. ಸರಿ ಇರುವುದಿಲ್ಲ ಇದು ನಮ್ಮ ಊರಿನ ಜನರ ಸಮಸ್ಯೆ ಎಂದು ವಾಮದಪದವು ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.