Friday, October 20, 2023

ಗ್ರಾ.ಪಂ. ಪಿಡಿಒ ಗಳ ವರ್ಗಾವಣೆ: ತಾಲೂಕಿನಿಂದ 7 ಹಾಗೂ ಹೊರ ತಾಲೂಕಿನಿಂದ 9 ಮಂದಿಯ ವರ್ಗಾವಣೆ

Must read

ಬೆಳ್ತಂಗಡಿ: ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆಗೆ ಸರಕಾರ ಆದೇಶ ನೀಡಿದಂತೆ ತಾಲೂಕಿನೊಳಗೆ 7 ಮಂದಿ ಹಾಗೂ ಹೊರ ತಾಲೂಕಿನಿಂದ 9 ಮಂದಿಯನ್ನು ವರ್ಗಾವಣೆ ಮಾಡಲಾಗಿದೆ.

ಕುಟ್ಟುಪಾಡಿ ಪಿಡಿಒ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್ ಕಳಿಯ ಗ್ರಾ.ಪಂ ಗೆ, ಬಂಟ್ವಾಳ ಪಿಡಿಒ ಧರ್ಮರಾಜ್ ಕೊಯ್ಯುರು ಗ್ರಾ.ಪಂ ಗೆ, ಕರಿಯಂಗಳ ಪಿಡಿಒ ಪದ್ಮನಾಯಕ್ ಬಂದಾರು ಗ್ರಾ.ಪಂ ಗೆ, ಅರಳ ಪಿಡಿಒ ಉತ್ತಮ ಚೆನ್ನಪ್ಪಬನಸೂರ್ ಕಣಿಯೂರು ಗ್ರಾ.ಪಂ ಗೆ, ಪಡಂಗಡಿ ಪಿಡಿಒ ಸುಧಾಕರ್ ವೇಣೂರು ಗ್ರಾ.ಪಂ ಗೆ, ಚಾರ್ಮಾಡಿ ಪಿಡಿಒ ಪ್ರಕಾಶ್ ಶೆಟ್ಟಿ ಪಿ.ಎಚ್. ಉಜಿರೆ ಗ್ರಾ.ಪಂ. ಗೆ, ಕಣಿಯೂರು ಪಿಡಿಒ ಗೌರಿಶಂಕರ್ ಮಚ್ಚಿನ ಗ್ರಾ.ಪಂ ಗೆ, ಕೊಯ್ಯೂರು ಪಿಡಿಒ ರಾಜೀವ್ ಬಳೆಂಜ ಗ್ರಾ.ಪಂ ಗೆ, ಬೆಳಾಲು ಪಿಡಿಒ ಶ್ರೀಧರ ಹೆಗ್ಡೆ ಕಡಿರುದ್ಯಾವರ ಗ್ರಾ.ಪಂ ಗೆ, ವೇಣೂರು ಪಿಡಿಒ ವೆಂಕಟ ಕೃಷ್ಣ ರಾಜ ಲಾಯಿಲ ಗ್ರಾ.ಪಂ ಗೆ, ಅಳದಂಗಡಿ ಪಿಡಿಒ ಇಮ್ತಿಯಾಝ್ ಕಲ್ಮಂಜ ಗ್ರಾ.ಪಂ ಗೆ, ಶಿರಾಡಿ ಪಿಡಿಒ ವೆಂಕಟೇಶ್ ಪಿ ಮಿತ್ತಬಾಗಿಲು ಗ್ರಾ.ಪಂ ಗೆ, ಕಣಿಯೂರು ಪಿಡಿಒ ಯೋಗಿಣಿ ಶೆಟ್ಟಿ ನಾರಾವಿ ಗ್ರಾ.ಪಂ ಗೆ, ಮಂಗಳೂರು ತಾಲೂಕಿನ ಸೂರಿಂಜೆ ಪಿಡಿಒ ರಾಜೇಂದ್ರ ಶೆಟ್ಟಿ ಅಳದಂಗಡಿ ಗ್ರಾ.ಪಂ ಗೆ, ತೆಂಕಮಿಜಾರು ಪಿಡಿಒ ಭಾಗ್ಯಲಕ್ಷ್ಮಿ ಅಂಡಿಂಜೆ ಗ್ರಾ.ಪಂ ಗೆ, ಬೆಳುವಾಯಿ ಪಿಡಿಒ ಭಿಮನಾಯ್ಕ ಬೆಳಾಲು ಗ್ರಾ.ಪಂ ಗೆ, ವರ್ಗಾವಣೆಗೊಳ್ಳುವ ಆದೇಶವನ್ನು ಸರಕಾರ ನೀಡಿದೆ.

More articles

Latest article