ಬೆಳ್ತಂಗಡಿ: ಕೊರೊನಾ ಸೋಂಕು ತಾಲೂಕಿನಲ್ಲಿ ಮತ್ತೊಂದು ಬಲಿಯನ್ನು ಪಡೆದಿದ್ದು, ನೆರಿಯಾ ಗ್ರಾಮದ ದೇವಗಿರಿ ಥೋಮಸ್ ಪಿ.ಎಂ. ರವರ ಪುತ್ರ ಮೃತಪಟ್ಟಿದ್ದಾರೆ.
43 ವರ್ಷದ ಇವರು ಪ್ರಸ್ತುತ ಮೂಡುಬಿದಿರೆಯಲ್ಲಿ ವಾಸ್ತವ್ಯ ಹೂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಇವರ ಗಂಟಲು ದ್ರವ ಪರೀಕ್ಷೆ ಮಾಡಿದಾಗ ಕೊರೊನಾ ವರದಿ ಪಾಸಿಟಿವ್ ದೃಢಪಟ್ಟಿತ್ತು.