ಬಂಟ್ವಾಳ: ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಮಾಲಾಡಿ ಗ್ರಾಮದ ಕೆತ್ತಿಗುಡ್ಡೆ ನಿವಾಸಿ, ರಮೇಶ ಎಂ.ಜೆ.ಅವರ ಪತ್ನಿ ಮತ್ತು ಮಗಳು ನಾಪತ್ತೆಯಾಗಿದ್ದಾರೆ.
ಮೂಲತ: ಸಕಲೇಶಪುರದ ಮೂಗುಳಿಯವರಾದ ರಮೇಶ ಅವರು ಕೆತ್ತಿಗುಡ್ಡೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಕೂಲಿ ಕಾರ್ಮಿಕರಾಗಿದ್ದಾರೆ. ಜೂ. 23 ರಂದು ತಾನು ಕೆಲಸ ಮುಗಿಸಿ ಸಂಜೆ ಮನೆಗೆ ಬಂದಾಗ ತನ್ನ ಪತ್ನಿ ಗೀತಾ (44) ಮಗಳು ರಕ್ಷಿತಾ(16) ಮನೆಯಲ್ಲಿರದೆ, ನೆರೆಕರೆಯವರಲ್ಲಿ ವಿಚಾರಿಸಿದಾಗ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ. ಬಳಿಕ ಸಂಬಂದಿಕರಲ್ಲಿ ವಿಚಾರಿಸಿದ್ದು ಸುಳಿವು ದೊರಕಿಲ್ಲ ಎಂದು ಅವರು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.