Thursday, October 26, 2023

ಬಜಪೆ: ಗಂಡನೇ ಹೆಂಡತಿಯನ್ನು ಕಲ್ಲಿನ ಕೋರೆಗೆ ದೂಡಿ ಹತ್ಯೆಗೈದು ಪರಾರಿ

Must read

ಮಂಗಳೂರು: ಟಿಪ್ಪರ್‌ ಚಾಲಕನೋರ್ವ ತನ್ನ ಪತ್ನಿಯನ್ನು ಕಲ್ಲಿನ ಕೋರೆಗೆ ದೂಡಿ ಹತ್ಯೆಗೈದು ಪರಾರಿಯಾದ ಘಟನೆ ಬಜಪೆ ಸಮೀಪದ ಅಂತೋಣಿಕಟ್ಟೆಯಲ್ಲಿ ನಡೆದಿದೆ.

ಮೃತ ಮಹಿಳೆ ಕಾವೂರು ನಿವಾಸಿ ಶಾಂತಾ(30) ಎಂದು ಗುರುತಿಸಲಾಗಿದೆ.

ಹತ್ಯೆಗೈದ ವ್ಯಕ್ತಿ ಕಾವೂರಿನಲ್ಲಿ ಟಿಪ್ಪರ್‌ ಚಾಲಕನಾಗಿರುವ ಗಣೇಶ್‌ (40) ಮೂಲತಃ ಹಾಸನದ ನಿವಾಸಿಯಾಗಿದ್ದು, ಆತನ ಪತ್ನಿ ಶಾಂತಾ ಕಾಸರಗೋಡಿನ ಸಾಲೆತಡ್ಕ ನಿವಾಸಿ. ಇವರಿಗೆ ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಇದ್ದಾರೆ. ಇವರು ಇತ್ತೀಚೆಗೆ ಕಾವೂರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದರು.

ಗಂಡ-ಹೆಂಡತಿ ನಡುವೆ ವೈಮನಸ್ಸು ಉಂಟಾದ ಹಿನ್ನೆಲೆ ಪತ್ನಿ ಶಾಂತಾ ಮಕ್ಕಳನ್ನು ಕರೆದುಕೊಂಡು ಕೆಲವು ಸಮಯದಿಂದ ಪ್ರತ್ಯೇಕವಾಗಿ ವಾಸವಾಗಿದ್ದರು. ಇತ್ತೀಚೆಗೆ ಪತಿ ಮಾತುಕತೆ ನಡೆಸಿ ಆಕೆಯನ್ನು ವಾಪಾಸ್ ಮನೆಗೆ ಕರೆದುಕೊಂಡು ಬಂದಿದ್ದನು. ಜು.1 ರ ಸಂಜೆ ಪತ್ನಿಯನ್ನು ವಾಪಾಸ್‌ ಕರೆದುಕೊಂಡು ಹೋದ ಪತಿ ವಾಪಾಸ್‌ ಕರೆದುಕೊಂಡು ಬಂದಿರದೇ ಜು. 2 ರಂದು ತನ್ನ ಮನೆಯಲ್ಲಿ ಮಕ್ಕಳೊಂದಿಗೆ ಇದ್ದ ಪತ್ನಿ ಶಾಂತಾ ಅವರ ತಾಯಿಗೆ ಕರೆ ಮಾಡಿ ಪತ್ನಿಯನ್ನು ಹತ್ಯೆ ಮಾಡಿದ್ದೇನೆ ಎಂದು ತಿಳಿಸಿದ್ದಾನೆ. ಬಳಿಕ ಆಕೆಯ ತಾಯಿ ಕಾಪೂರು ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ. ನಿನ್ನೆ ರಾತ್ರಿ ಪೊಲೀಸರು ಆರೋಪಿ ಗಣೇಶ್‌ ಕಲ್ಲು ಸಾಗಾಟ ಮಾಡುತ್ತಿದ್ದ ಕರಂಬಾರಿನ ಕಲ್ಲಿನ ಕೋರೆಗೆ ಹೋಗಿದ್ದು, ಆತನ ಪತ್ನಿ ಶಾಂತಾ ಅವರ ಮೃತದೇಹ ಅಲ್ಲಿ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ಈ ಕಾರಣದಿಂದ ಆರೋಪಿ ಆಕೆಯ ಪತಿ ಪರಾರಿಯಾಗಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಕಾವೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

More articles

Latest article