Tuesday, October 17, 2023

ನವೋದಯ ಆಟೋ ರಿಕ್ಷಾ ಮಾಲಕ -ಚಾಲಕ ಸಂಘದ ವಾರ್ಷಿಕ ಮಹಾಸಭೆ

Must read

ಬಂಟ್ವಾಳ: ನವೋದಯ ಆಟೋ ರಿಕ್ಷಾ ಮಾಲಕ -ಚಾಲಕ ಸಂಘದ ವಾರ್ಷಿಕ ಮಹಾಸಭೆಯು ಎಸ್.ಎಂ. ಕಾಂಪ್ಲೆಕ್ಸ್ ಬಡಕಬೈಲ್ ನಲ್ಲಿ ನವೋದಯ ಆಟೋ ರಿಕ್ಷಾ ಮಾಲಕ ಚಾಲಕ ಸಂಘದ ಗೌರವಾಧ್ಯಕ್ಷ ಇಬ್ರಾಹಿಂ ನವಾಝ್ ಅವರ ನೇತೃತ್ವದಲ್ಲಿ ನಡೆಯಿತು.

2020-2021 ನೇ ಸಾಲಿನ ಅಧ್ಯಕ್ಷರಾಗಿ ಚೂರ್ ದಾಸ, ಉಪಾಧ್ಯಕ್ಷರಾಗಿ ಶೆಖ್ ಮೊನು, ಪ್ರದಾನ ಕಾರ್ಯದರ್ಶಿಯಾಗಿ ಅಕ್ಬರ್, ಜೊತೆ ಕಾರ್ಯದರ್ಶಿಯಾಗಿ ಶೆರೀಪ್, ಕೋಶಾಧಿಕಾರಿಯಾಗಿ ರೋಹಿತ್ ಆಯ್ಕೆಯಾಗಿದ್ದಾರೆ.

ನಾಲ್ಕನೇ ಬಾರಿಗೆ ಗೌರವಾಧ್ಯಕ್ಷರಾಗಿ ಇಬ್ರಾಹಿಂ ನವಾಝ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಲೆಹೆಗಾರರಾಗಿ ಬಶೀರ್ ಅಹ್ಮದ್ ಗಾಣೆಮಾರ್ ಹಾಗೂ ನಾರಾಯಣ ಬಡಕಬೈಲು ಆಯ್ಕೆಯಾಗಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ರಿಕ್ಷಾ ಚಾಲಕರಿಗೆ ಮಾಸ್ಕ್ ಹಾಗೂ ಸೈನಿಟೈಝರ್ ವಿತರಿಸಲಾಯಿತು.

More articles

Latest article