ಬಂಟ್ವಾಳ: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತಲಪಾಡಿ ಘಟಕದ ವತಿಯಿಂದ ಪಕ್ಷದ ಸಂಸ್ಥಾಪನಾ ದಿನಾಚರಣೆಯನ್ನು ಕೋವಿಡ್ ಜಾಗರೂಕತೆಯನ್ನು ಪಾಲಿಸಿಕೊಂಡು ನಡೆಸಲಾಯಿತು. ತಲಪಾಡಿ ಘಟಕದ ಅಧ್ಯಕ್ಷರಾದ ಸಾಹುಲ್ ತಲಪಾಡಿ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿ ಎಸ್.ಡಿ.ಪಿ.ಐ ಬಂಟ್ವಾಳ ಪುರಸಭಾ ಅಧ್ಯಕ್ಷ ಮೂನಿಶ್ ಅಲಿ ಪಕ್ಷ ಸಾಗಿ ಬಂದ ಹೋರಾಟದ ಕುರಿತು ಮಾತನಾಡಿದರು. ಪಾಪ್ಯುಲರ್ ಫ್ರಂಟ್ ಬಿ.ಸಿ.ರೋಡ್ ವಲಯ ಅಧ್ಯಕ್ಷ ಅಕ್ಬರ್ ಅಲಿ ಸಂಧರ್ಭ ಮಾತನಾಡಿದರು. ಭಾರತ ಚೀನಾ ಗಡಿಯಲ್ಲಿ ಹುತಾತ್ಮರಾದ ಯೋಧರಿಗೆ ಮೌನ ಪ್ರಾರ್ಥನೆ ನಡೆಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಹುಲ್ ಹಮೀದ್ ಎಸ್.ಎಚ್, ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಉಪಾಧ್ಯಕ್ಷ ಉಬೈದುಲ್ಲಾ, , ಲತೀಫ್ ಬಿ.ಸಿ, ಇದಿನಬ್ಬ, ಮುಸ್ತಾಕ್, ಹಫೀಜ್, ಅಶ್ರಫ್ ಹಾಗು ಮತ್ತಿತರರು ಉಪಸ್ಥಿತರಿದ್ದರು. ಸಸಿ ವಿತರಣೆ ಕಾರ್ಯಕ್ರಮ ನಡೆಯಿತು. ಅಶ್ಪಾಕ್ ಪೊನ್ನೋಡಿ ನಿರೂಪಿಸಿ, ಸಾದಿಕ್ ವಂದಿಸಿದರು.