ಬೆಳ್ತಂಗಡಿ : ಪಾರೆಂಕಿ ಡಿ. ದೇವರಾಜ್ ಅರಸು ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿ ನಿಲಯದ ದಶಕಗಳ ಸಮಸ್ಯೆಯ ಬಗ್ಗೆ ಮಡಂತ್ಯಾರು ಪಂಚಾಯತ್ ಪಿಡಿಒ ನಾಗೇಶ್ ಎಂ. ರವರು ವಾಟ್ಸಾಪ್ ಮೂಲಕ ಸಲ್ಲಿಸಿದ ಕೋರಿಕೆಯನ್ನು ಎರಡೇ ದಿನದಲ್ಲಿ ಪರಿಹರಿಸಿದ ಮೆಸ್ಕಂ ಸೂಪರಿಂಟೆಂಡೆಂಟ್ ಇಂಜಿನಿಯರ್ ಮಂಜಪ್ಪ.
ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಅಪಾಯ ಆಗದಂತೆ ಹಾಸ್ಟೆಲ್ ಜಮೀನಿನ ಮದ್ಯೆ ಹಾದು ಹೋಗಿದ್ದ ವಿದ್ಯುತ್ ತಂತಿಯನ್ನು ಸ್ಥಳಾಂತರಿಸಿದರು.