Wednesday, October 18, 2023

ಬಿಜೆಪಿ ಹಿರಿಯ ಕಾರ್ಯಕರ್ತ ಗಣೇಶ್ ಪೂಜಾರಿ ನಿಧನ

Must read

ವಿಟ್ಲ: ಪುಣಚ ಗ್ರಾಮದ ಬಳಂತಿಮೊಗರು ಗಣೇಶ್ ಪೂಜಾರಿ(67) ಶನಿವಾರ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.

ಜನಸಂಘದ ಕಾಲದಿಂದಲೂ ಬಿಜೆಪಿಯ ಹಿರಿಯ ಕಾರ್ಯಕರ್ತರಾಗಿ ದುಡಿದಿದ್ದ ಅವರು, ಅಯೋಧ್ಯೆಯ ಕರಸೇವೆಯಲ್ಲಿಯೂ ಭಾಗವಹಿಸಿದ್ದರು. ಪುಣಚ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರಾಗಿದ್ದ ಅವರು ಬಳಂತಿಮೊಗರು ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿದ್ದರು.

ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

More articles

Latest article