Wednesday, October 18, 2023

ಅಪಘಾತಕ್ಕೊಳಗಾದ ಕುಟುಂಬಕ್ಕೆ ಬ್ರಹ್ಮಶ್ರೀ ವಾಟ್ಸಾಪ್ ಗ್ರೂಪ್ ತಂಡದಿಂದ ನೆರವು

Must read

ಬೆಳ್ತಂಗಡಿ: ತಾಲೂಕಿನ ಶಿಶಿಲ ಗ್ರಾಮದ ಕೊಳಕ್ಕೆಬೈಲು ನೆಲ್ಲಿಗುಡ್ಡೆ ನಿವಾಸಿ ಬಾಲಕೃಷ್ಣ ಪೂಜಾರಿರವರು ನೆಲ್ಯಾಡಿ ಸಮೀಪದ ಹೊಸಮಜಲುವಿನಲ್ಲಿ ಕೆಲ ದಿನಗಳ ಹಿಂದೆ ನಡೆದ ಅಪಘಾತದಲ್ಲಿ ಬಹುವಾಗಿ ಗಾಯಗೊಂಡು ಮುಖ, ಕೈ- ಕಾಲುಗಳಿಗೆ ಅತಿಯಾಗಿ ಗಾಯವಾಗಿ ನಾಲಿಗೆಯು ತುಂಡಾಗಿರುತ್ತದೆ.ಆರ್ಥಿಕ ಸಂಕಷ್ಟದಲ್ಲಿ ಇರುವ ಈ ಕುಟುಂಬಕ್ಕೆ ಇಂದು ಬ್ರಹ್ಮಶ್ರೀ ವಾಟ್ಸಾಪ್ ಗ್ರೂಪಿನ ಸದಸ್ಯರಿಂದ ಸಂಗ್ರಹಿಸಿದ ಆರ್ಥಿಕ ನೆರವನ್ನು ಇಂದು ಹಸ್ತಾಂತರಿಸಲಾಯಿತು.

ಈ ಸಂಧರ್ಭದಲ್ಲಿ ಬ್ರಹ್ಮಶ್ರೀ ಗುಂಪಿನ ಸದಸ್ಯ, ಬೆಳ್ತಂಗಡಿ ಯುವವಾಹಿನಿ ಘಟಕದ ಸಂಘಟನ ಕಾರ್ಯದರ್ಶಿ ಸುರೇಂದ್ರ ಕೋಟ್ಯಾನ್ ಬೆಳ್ತಂಗಡಿ, ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ ಅಧ್ಯಕ್ಷ ಎಂ.ಕೆ. ಪ್ರಸಾದ್, ಕಾರ್ಯದರ್ಶಿ ಗುರುರಾಜ್ ಪೂಜಾರಿ ಗುರಿಪಳ್ಳ, ಘಟಕದ ಸಂಘಟನ ಕಾರ್ಯದರ್ಶಿ ರಮೇಶ್ ಬಂಗೇರ ಓಟ್ಲ ಹಾಗೂ ಸ್ಥಳೀಯರಾದ ಪೂವಪ್ಪ ಪೂಜಾರಿ ಉಪಸ್ಥಿತರಿದ್ದರು.

More articles

Latest article