ಬೆಳ್ತಂಗಡಿ: ಲಾಕ್ ಡೌನ್ ಅವಧಿಯಲ್ಲಿ ಬೀಡಿ ಕಾರ್ಮಿಕರ ಬ್ಯಾಂಕ್ ಖಾತೆಗೆ ಮಾಸಿಕ ಕನಿಷ್ಟ 6000 ರೂಪಾಯಿ ನೀಡಲು ಸಿಐಟಿಯು ಒತ್ತಾಯಿಸಿ ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷ ಕಾ.ಶಿವಕುಮಾರ್ ಅವರ ನೇತೃತ್ವದಲ್ಲಿ ಹೋರಾಟ ನಡೆಯಿತು.
ಲಾಕ್ಡೌನ್ ಅವಧಿಯಲ್ಲಿ ಬೀಡಿ ಕಾರ್ಮಿಕರಿಗೆ ಕೆಲಸಗಳಿಲ್ಲದೆ ಬಹಳ ಸಂಕಷ್ಟ ಅನುಭವಿಸುತ್ತಿದ್ದಾರೆ. ಲಕ್ಷಾಂತರ ಜನ ಬೀಡಿ ಉದ್ಯಮದಲ್ಲಿ ತೊಡಗಿಸಿಕೊಂಡು ನಮ್ಮ ಜಿಲ್ಲೆಯ ಆರ್ಥಿಕ ಅಭಿವೃದ್ದಿಗೆ ಕಾರಾಣಕಾಗಿದ್ದಂತಹ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಬೇಕು.
ಲಾಕ್ ಡೌನ್ ಅವಧಿಯಲ್ಲಿ ಬೀಡಿ ಕಾರ್ಮಿಕರಿಗೆ ಪ್ರತಿ ತಿಂಗಳು ರೂ.6000/ ನೀಡಬೇಕು ಮತ್ತು ಕನಿಷ್ಠ ವೇತನ, ಬಾಕಿ ಮಾಡಿರುವ ತುಟ್ಟಿ ಭತ್ಯೆ ನೀಡಲು ಒತ್ತಾಯಿಸಿ ಬೆಳ್ತಂಗಡಿ ಮಿನಿ ವಿಧಾನ ಸೌಧ ಬಳಿ ನಿನ್ನೆ ಜೂ.10 ರಂದು ಸಿ.ಐ.ಟಿ.ಯು ಪ್ರತಿಭಟನೆ ನಡೆಯಿತು.
ಶಿವಕುಮಾರ್ ಎಸ್.ಎಂ., ವಸಂತ ನಡ, ಶೆಖರ್ ಲಾಯಿಲ, ಸುಜಿತ್ ರಾವ್, ಸುಕನ್ಯಾ, ಜಯಾನಂದ ಪಿಳಿಕಳ ಎಸ್.ಎಪ್.ಐ.ನ ಸುಹಾಸ್ ಅಡಿಗ, ಕುಸುಮ, ಸಾವಿತ್ರಿ ಮುಂತಾದವರು ಉಪಸ್ಥಿತರಿದ್ದರು.