ಮಂಗಳೂರು : ರೈಲಿನಲ್ಲಿ ಮುಂಬೈನಿಂದ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣಕ್ಕೆ ಸುಮಾರು 30 ಮಂದಿ ಆಗಮಿಸಿದ್ದು, ಪೊಲೀಸರ ಸೂಚನೆಯಂತೆ ಆಟೋ,ಬಸ್ನಲ್ಲಿ ಮನೆಗೆ ತೆರಳಿದ್ದಾರೆ.
ದೆಹಲಿ, ಮುಂಬೈ, ಕೇರಳ ಸಂಪರ್ಕದ ರೈಲಿನಲ್ಲಿ ಮುಂಜಾನೆ 3.30 ಗಂಟೆಗೆ ಈ ಮೂವತ್ತು ಜನರು ಆಗಮಿಸಿದ್ದು, ಅವರ ಪೈಕಿ 15 ಮಂದಿ ಮುಂಬಯಿನವರು.
ರೈಲ್ವೇ ನಿಲ್ದಾಣದಲ್ಲಿ ಅಧಿಕಾರಿಗಳು ಇಲ್ಲದ ಕಾರಣದಿಂದಾಗಿ ಮೂವರು ತಾವಾಗಿಯೇ ಸುರತ್ಕಲ್ ನಾಡ ಕಚೇರಿಗೆ ತೆರಳಿ ಮುಂಬೈನಿಂದ ಬಂದ ವಿಚಾರ ತಿಳಿಸಿದ್ದಾರೆ. ಮುಂಬೈನಿಂದ ಬಂದವರಿಗೆ 7 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯವಾಗಿದ್ದು, ಅಧಿಕಾರಿಗಳು ಮುಂಬೈಯಿಂದ ಬಂದ ಜನರ ಯಾವುದೇ ಮಾಹಿತಿ ಪಡೆದಿಲ್ಲ. ಪೊಲೀಸರು ಮನೆಯಲ್ಲೇ ಕ್ವಾರೆಂಟೈನ್ಗೆ ಒಳಗಾಗುವಂತೆ ಸೂಚನೆ ನೀಡಿದ್ದು ಮುಂಬೈನಿಂದ ಬಂದ ಜನರು ಕೂಡಾ ಮನೆಯಲ್ಲೇ ಕ್ವಾರಂಟೈನ್ಗೆ ಒಳಗಾಗುವುದಾಗಿ ತಿಳಿಸಿದರು.