



ಬೆಳ್ತಂಗಡಿ: ತಾಲೂಕಿನಲ್ಲಿರುವ ಕಂದಾಯ ಇಲಾಖೆಯ 54 ಗ್ರಾಮ ಸಹಾಯಕರ ಕುಟುಂಬಗಳಿಗೆ ದೈನಂದಿನ ಉಪಯೋಗದ ಆಹಾರ ಸಾಮಾಗ್ರಿಗಳ ಕಿಟ್ ಅನ್ನು ಶ್ರಮಿಕದ ನೆರವಿನಿಂದ ವಿತರಿಸಲಾಯಿತು.
ಬೆಳ್ತಂಗಡಿಯ ಶ್ರಮಿಕ ಕಛೇರಿಯಲ್ಲಿ ಪಾಲ್ಗೊಂಡಿದ್ದ 54 ಗ್ರಾಮದ ಸದಸ್ಯರಿಗೂ ದಿನಬಳಕೆಯ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾನ್ಯ ಶಾಸಕ ಹರೀಶ್ ಪೂಂಜಾ, ಶ್ರಮಿಕದ ಕಛೇರಿ ಸದಸ್ಯರು ಹಾಗು ಆಹಾರ ಸಾಮಾಗ್ರಿಗಳ ಕಿಟ್ ಪಡೆದುಕೊಂಡ 54 ಗ್ರಾಮದ ಸದಸ್ಯರು ಪಾಲ್ಗೊಂಡಿದ್ದರು.





