ಬಂಟ್ವಾಳ: ಸೀಲ್ ಡೌನ್ ಏರಿಯಾದಲ್ಲಿ ಬಿಜೆಪಿ ಮುಖಂಡನ ರಂಪಾಟ ಮಾಡಿದ್ದಾರೆ ಎಂದು ಆರೋಪಿಸಿ ಮಂಗಳೂರಿನಲ್ಲಿ ಮಾಜಿ ಸಚಿವ ರಮಾನಾಥ ರೈ ಹೇಳಿಕೆ ನೀಡಿದ್ದಾರೆ.
ಬಂಟ್ವಾಳ ಪೇಟೆಯಲ್ಲಿ ಸೀಲ್ ಡೌನ್ ವಾಪಸ್ಸು ಪಡೆಯಬೇಕೆಂಬ ಬೇಡಿಕೆ ಇದೆ. ಇದಕ್ಕೂ ಮೊದಲು ನಾನು ಒಂದು ಸಲ ಸೀಲ್ ಡೌನ್ ವ್ಯಾಪ್ತಿಯ ಹೊರಗಡೆ ಸಾಂತ್ವನ ಹೇಳಲು ಹೋಗಿದ್ದೆ ಅದ್ರೆ ಸೀಲ್ ಡೌನ್ ಏರಿಯದೊಳಗೆ ಹೋಗಿಲ್ಲ ಅದ್ರೆ ಅದನ್ನು ಬಿಜೆಪಿ ಮುಖಂಡರು, ಕಾರ್ಯಕರ್ತರು ಕಸಬಾ ಗ್ರಾಮದ ಸೀಲ್ ಡೌನ್ ಏರಿಯಾದೊಳಗೆ ಹೋಗಿ ಗಲಾಟೆ ಮಾಡಿದ್ದಾರೆ ಎಂದು ನನ್ನ ಮೇಲೆ ಆರೋಪ ಮಾಡಿದ್ದರು.
ಅವತ್ತು ನನಗೆ ವಿರೋಧ ವ್ಯಕ್ತಪಡಿಸಿದ ಇವರು ಇವತ್ತು ಸೀಲ್ ಡೌನ್ ಒಳಗೆ ಹೋಗಿ ಗಲಾಟೆ ಮಾಡಿದ್ದು ಸರಿನಾ? ಎಂದು ಅವರು ಪ್ರಶ್ನಿಸಿದರು.
ಅಧಿಕಾರಿಗಳು, ಪೊಲೀಸರ ಮಧ್ಯೆ ಗಲಾಟೆ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು. ನಾನು ಹೋಗಿರುವ ಸಂದರ್ಭದಲ್ಲಿ ರಾಜಕೀಯ ಮಾಡಿ ನನ್ನ ವಿರುದ್ಧ ಅರೋಪ ಮಾಡಿದವರು ಇವತ್ತು ಏನು ಮಾಡುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದರು.
ಜಿಲ್ಲಾಡಳಿತ ಈ ಬಗ್ಗೆ ಪರಿಶೀಲನೆ ನಡೆಸಿ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಿದೆ ಎಂದು ಅವರು ಒತ್ತಾಯಿಸಿದರು.