ಬಂಟ್ವಾಳ: ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ವರ್ಕ್ಪ್ಯ್ ಬೋರ್ಡ್ ವತಿಯಿಂದ 50 ಲಕ್ಷವನ್ನು ದೇಣಿಗೆ ರೂಪದಲ್ಲಿ ನೀಡುವುದನ್ನು ವಿರೋದ ವ್ಯಕ್ತ ಪಡಿಸಿದ ಚಾಮರಾಜ ಪೇಟೆ ಶಾಸಕ ಜಮೀರ್ ಅಹಮ್ಮದ್ ರವರನ್ನು ಭಾರತೀಯ ಒಕ್ಕೂಟದ ವ್ಯವಸ್ಥೆಗೆ ವಿರುದ್ಧವಾಗಿ ಮಾತಾಡಿದ ಮೇರೆಗೆ ಇವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಪೂರ್ವಪರ ತನಿಖೆ ನಡೆಸಿ ಕ್ರಿಮಿನಲ್ ಮೊಕದ್ದಮೆ ಹೂಡಲು ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಆಗ್ರಹ ವ್ಯಕ್ತಪಡಿಸಿದ್ದಾರೆ.
ಅವರು ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿ ವರ್ಕ್ಪ ಬೋರ್ಡ್ ಹಣ ಕರ್ನಾಟಕ ಸರ್ಕಾರ ಸೇರಿದ್ದಾಗಿದೆ.
ಈ ಹಣ ಶಾಸಕ ಜಮೀರ್ ಅಹಮ್ಮದ್ ಹಾಗೂ ಮುಸ್ಲಿಂ ಧರ್ಮದ ಆಸ್ತಿ ಅಲ್ಲ.
ಅದಾಗಿಯೂ ಕೊರೊನಾ ಸಾಂಕ್ರಾಮಿಕ ರೋಗ ಕೇವಲ ಧರ್ಮ,ಜಾತಿಗೆ ಸೀಮಿತವಲ್ಲ.
ಈ ಬಗ್ಗೆ ಜಮೀರ್ ತನ್ನ ನಾಲಿಗೆಯನ್ನು ಹಿಡಿತದಲ್ಲಿಡ ಬೇಕು.
ರಾಷ್ಟ್ರೀಯ ವಿಚಾರದಲ್ಲಿ ಧರ್ಮ, ಜಾತಿ ಬಿತ್ತುವ ಶಾಸಕ ಜಮೀರ್ ಅಹಮ್ಮದ್ ರವರ ಶಾಸಕತ್ವ ಅನರ್ಹ ಗೊಳಿಸಬೇಕು.
ಮತ್ತೆ ಎಲ್ಲಿಯೂ ಚುನಾವಣಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡದಂತೆ ಕಾನೂನು ಕ್ರಮ ಕೈಗೊಳ್ಳ ಬೇಕು..
ರಾಜ್ಯದ ಹಲವಾರು ಜನರಿಗೆ ಮೋಸ ಮಾಡಿದ ಹಲವು ಹಗರಣಗಳ ಸರಮಾಲೆಗಳ ಸರದಾರರ ನಂಟ್ಟು ಹೋಂದಿರುವ ಈ ಶಾಸಕರು ದೇಶ ದ್ರೋಹ ಮಾಡುತ್ತೀರುವುದು ಗುಟ್ತಾಗಿ ಉಳಿದಿಲ್ಲ.
ತಕ್ಸಣದಿಂದಲೇ ಇವರನ್ನು ಬಂಧಿಸಿ ಕ್ರಮ ಕೈಗೊಳ್ಳಲು .
ಪ್ರಧಾನ ಮಂತ್ರಿ ಮೋದಿಜೀ.
ಕೇಂದ್ರ ಗೃಹ ಸಚಿವರಸ್ದ ಅಮೀತ್ ಷಾಜೀ ಯವರನ್ನು ವಿನಂತಿಸಿದ್ದಾರೆ.