Tuesday, October 31, 2023

ಬೈಕ್ ಸವಾರನಿಂದ ಯುವಕನಿಗೆ ಚೂರಿ ಇರಿತ

Must read

ಮೂಡಬಿದ್ರಿ: ಬೈಕ್ ನಲ್ಲಿ ಅತೀ ವೇಗದಲ್ಲಿ ಸವಾರಿ ಮಾಡುತ್ತಿದ್ದ ಯುವಕನನ್ನು ತಡೆಯುವ ಸಂದರ್ಭ ಬೈಕ್ ಸವಾರ, ಸ್ಥಳೀಯ ಯುವಕನಿಗೆ ಚೂರಿ ಇರಿದು ಪರಾರಿಯಾದ ಘಟನೆ ಪುಚ್ಚೆಮೊಗರು ಸಮೀಪ ತಾಕೊಡೆ ಕ್ರಾಸ್ ಬಳಿ ಮಂಗಳವಾರ ನಡೆದಿದೆ.
ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಕಡೆಯಿಂದ ಅತೀ ವೇಗದಲ್ಲಿ ಬೈಕ್ ಸವಾರಿ ಮಾಡಿಕೊಂಡು ಬರುತ್ತಿದ್ದ ಸವಾರ ಪುಚ್ಚೆಮೊಗರುವಿನಲ್ಲಿ ಪೊಲೀಸರು ಅಳವಡಿಸಿದ ಬ್ಯಾರಿ ಕೇಡ್ ಗೆ ಡಿಕ್ಕಿ ಹೊಡೆದಿದ್ದಾನೆ. ಅಲ್ಲಿಂದ ಮತ್ತೆ ಅತೀ ವೇಗವಾಗಿ ಬೈಕ್ ಸವಾರಿ ಮಾಡಿಕೊಂಡು ಬರುತ್ತಿರುವುದುದನ್ನು ನೋಡಿದ ಯುವಕರು ಆತನನ್ನು ಬೆನ್ನಟ್ಟಿ ತಡೆದಿದ್ದಾರೆ. ಈ ಸಂದರ್ಭದಲ್ಲಿ ಬೈಕ್ ಸವಾರ ಚೂರಿಯಿಂದ ಕರಿಂಜೆ ನಿವಾಸಿ ಶಿವ ಕುಮಾರ್ ಎಂಬಾತನಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾನೆ. ಗಾಯಗೊಂಡಿರುವ ಯುವಕನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

More articles

Latest article