ವಿಟ್ಲ: ಅಳಿಕೆ ವ್ಯವಸಾಯ ಸೇವಾ ಸಹಕಾರಿ ಸಂಘದ ವಿಶೇಷ ನಿಧಿ ಮತ್ತು ನಿರ್ದೇಶಕರ ವೈಯಕ್ತಿಕ ಸಹಾಯ ಹಾಗೂ ಸಂಘದ ಉದ್ಯೋಗಿಗಳ ಒಂದು ದಿನದ ವೇತನವನ್ನು ಒಟ್ಟುಗೂಡಿಸಿ ಅತ್ಯವಶ್ಯಕ ದಿನಬಳಕೆ ಸಾಮಾಗ್ರಿಗಳ 210 ಕಿಟ್ ಅನ್ನು ಆಯ್ದ ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು.
ಆಶಾ ಕಾರ್ಯಕರ್ತರಿಗೆ ಹಾಗೂ ಆಸ್ಪತ್ರೆ ಸಿಬ್ಬಂದಿಗಳಿಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಹಾಗೂ ಪಂಚಾಯಿತಿ ಸದಸ್ಯೆ ಮುಕಾಂಬಿಕಾ ಎಂ. ಭಟ್ ಅವರ ನೆರವಿನಿಂದ ಕಿಟ್ ವಿತರಣೆ ಮಾಡಲಾಯಿತು.
ಸಂಘದ ಅಧ್ಯಕ್ಷ ಕಾನ ಈಶ್ವರ ಭಟ್, ಉಪಾಧ್ಯಕ್ಷ ರೂಪೇಶ್ ರೈ ಜಿ. ಎನ್., ನಿರ್ದೇಶಕರಾದ ಬಿ. ತಿಮ್ಮಪ್ಪ ಶೆಟ್ಟಿ, ಸೀತಾರಾಮ ಶೆಟ್ಟಿ, ಆನಂದ ಶೆಟ್ಟಿ, ಚಂದ್ರನಾಥ ಆಳ್ವ ಎಂ., ಚಂದ್ರಾವತಿ, ವಿನಯ, ವಸಂತ ಎ., ಭಾಸ್ಕರ, ಮಹೇಶ್, ವೇದಾವತಿ, ಸುಂದರ ನಾಯ್ಕ, ವ್ಯವಸ್ಥಾಪಕ ನಿರ್ದೇಶಕ ಉಮೇಶ್ ನಾಯಕ್, ಸಿಬ್ಬಂದಿಗಳಾದ ಚಂದ್ರಹಾಸ ರೈ, ರಾಘವ, ಪ್ರೇಮ ಮತ್ತಿತರರು ಉಪಸ್ಥಿತರಿದ್ದರು.