Friday, October 27, 2023

ಎರಡನೇ ಹಂತದ ಲಾಕ್‌ಡೌನ್‌ ವಿಸ್ತರಣೆ ಬಗ್ಗೆ ಪ್ರಧಾನಿ ಮೋದಿ ಮಾತು

Must read

ಬಂಟ್ವಾಳ: ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದ 21 ದಿನಗಳ ಲಾಕ್‌ ಡೌನ್ ಅವಧಿ ಇಂದಿಗೆ ಮುಕ್ತಾಯವಾಗಿದೆ. ಈ ನಡುವೆ ಇಂದು ಪ್ರಧಾನಿ ಮೋದಿಯವರು ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದು, ಇದೇ ವೇಳೆ ಅವರು ಮಾತನಾಡುತ್ತ ಭಾರತದಾದ್ಯಂತ ಎರಡನೇ ಹಂತದ ಲಾಕ್‌ಡೌನ್‌ ಅನ್ನು ಮೇ 3 ತನಕ ವಿಸ್ತರಣೆ ಮಾಡಲಾಗುವುದು ಎಂದು ಘೋಷಣೆ ಮಾಡಿದರು.

ಕೊರೊನಾ ನಿಯಂತ್ರಣ ಮಾಡುವುದಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ಮೋದಿಯವರು ಇದು  ಮೂರನೇ ಬಾರಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ

ಪ್ರಧಾನಿ ಮೋದಿ ಹೇಳಿದ್ದು ಏನು ?
ದೇಶವನ್ನು ರಕ್ಷಿಸಲು ಭಾರತದ ಜನರು ದಿನಗಳಿಂದ ಯಾವ ರೀತಿಯ ತೊಂದರೆಗಳನ್ನು ಸಹಿಸಿಕೊಳ್ಳುತ್ತಿದ್ದಾರೆಂದು ನನಗೆ ತಿಳಿದಿದೆ. ನೀವು ಆಹಾರ, ಕೆಲಸದ ತೊಂದರೆಗಳನ್ನು ಎದುರಿಸಿದ್ದೀರಿ, ಆದರೆ ನೀವು ಇನ್ನೂ ಹೋರಾಡಲು ನಿರ್ಧರಿಸಿದ್ದೀರಿ ಎಂದು ಹೇಳಿದರು. ಇದೇ ವೇಳೆ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನವಾದ ಇಂದು ಪ್ರಧಾನಿ ಮೋದಿ ಅವರು ಶುಭಾಶಯ ಕೋರಿದರು. ವಿದೇಶದಿಂದ ಬಂದವರನ್ನು ಸ್ಕ್ರೀನಿಂಗ್ ಮಾಡಿದ್ದೇವೆ. ನಿಮ್ಮ ನಿಮ್ಮ ಪರಿವಾರದ ಆರೋಗ್ಯಕ್ಕಾಗಿ ನಾನು ಪ್ರಾರ್ಥನೆ ಮಾಡುವೆ ಎಂದು ಹೇಳಿದರು. ವಿದೇಶಗಳಿಗೆ ಹೋಲಿಕೆ ಮಾಡಿದ್ರೆ ಕೋರಾನ ಹೋರಾಟದಲ್ಲಿ ನಾವು ಮುಂದೆ ಇದ್ದೇವೆ ಆಂತ ಹೇಳಿದರು. ವಿದೇಶಗಳಲ್ಲೂ ಕೂಡ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ ಅಂತ ಹೇಳಿದರು. ಇನ್ನು ಸಾಮಾಜಿಕ ಅಂತರ ಎನ್ನುವುದು ಬಹಳ ಪ್ರಮುಖ ಪ್ರಮುಖವಾದ ಅಂಶವಾಗಿದೆ ಅಂತ ಹೇಳಿದರು. ಭಾರತವು ಯಾವುದೇ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡುವ ಮೊದಲೇ ಸ್ಕ್ರೀನಿಂಗ್ ಪ್ರಾರಂಭವಾಯಿತು ಅಂತ ಹೇಳಿದರು. ಭಾರತೀಯರ ಜೀವದ ಮುಂದೆ ಆರ್ಥಿಕತೆ ದೊಡ್ಡದಲ್ಲ ಎಂದು ಹೇಳಿದರು.

ಲಾಕ್‌ಡೌನ್ ಎಂದರೇನು?
ಲಾಕ್‌ಡೌನ್ ಎನ್ನುವುದು ತುರ್ತು ಪ್ರೋಟೋಕಾಲ್ ಆಗಿದ್ದು ಅದು ಜನರು ನಿರ್ದಿಷ್ಟ ಪ್ರದೇಶವನ್ನು ಬಿಡುವುದನ್ನು ತಡೆಯುತ್ತದೆ. ಈ ಸನ್ನಿವೇಶದಲ್ಲಿ ಸಾಮಾನ್ಯವಾಗಿ ಅಗತ್ಯ ಸರಬರಾಜು, ಕಿರಾಣಿ ಅಂಗಡಿಗಳು, ಔಷಧಾಲಯಗಳು ಮತ್ತು ಬ್ಯಾಂಕುಗಳು ಜನರಿಗೆ ಸೇವೆ ಸಲ್ಲಿಸಲು ಅನುವು ಮಾಡಿಕೊಡುತ್ತದೆ. ಎಲ್ಲಾ ಅನಿವಾರ್ಯ ಚಟುವಟಿಕೆಗಳು ಇಡೀ ಅವಧಿಗೆ ಸ್ಥಗಿತಗೊಳ್ಳುತ್ತವೆ. ಪೂರ್ಣ ಲಾಕ್‌ಡೌನ್ ಎಂದರೆ ನೀವು ಎಲ್ಲಿಯೇ ಇರಬೇಕು ಮತ್ತು ನಿರ್ಗಮಿಸಬಾರದು ಅಥವಾ ಕಟ್ಟಡ ಅಥವಾ ನಿರ್ದಿಷ್ಟ ಪ್ರದೇಶವನ್ನು ಬಿಡಬಾರದು. ಭಾರತವನ್ನು ಇಲ್ಲಿ ತನಕ ಸಂಪೂರ್ಣ ಲಾಕ್ ಡೌನ್ ಮಾಡಿಲ್ಲ.

More articles

Latest article