ಮಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಗೃಹ ರಕ್ಷದಳ ಮಹಿಳಾ ಸಿಬ್ಬಂದಿ ಮಂಗಳೂರು ಶಕ್ತಿನಗರ ಮೊಗರೋಡಿ ನಿವಾಸಿ ಚಂಪಾ ಅವರ ಮನೆಗೆ ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಭೇಟಿ ನೀಡಿದ್ದಾರೆ.
ಅನಾರೋಗ್ಯ ಮತ್ತು ಆರ್ಥಿಕವಾಗಿ ತೊಂದರೆ ಯಲ್ಲಿರುವ ಚಂಪಾ ಅವರನ್ನು ಕೂಡಲೇ ಆಸ್ಪತ್ರೆ ಗೆ ದಾಖಲಿಸುವ ಕಾರ್ಯಗಳು ಶೀಘ್ರವಾಗಿ ನಡೆಯಬೇಕಾಗಿದೆ. ಈವರಗೆ ಆಸ್ಪತ್ರೆಗೆ ದಾಖಲಿಸಿ ಔಷಧದ ಭರವಸೆ ನೀಡಿದ ಯಾರು ಕೂಡ ಅ ಸಾಹಸಕ್ಕೆ ಮುಂದಾಗಿಲ್ಲ ಎಂದು ಅವರು ಸ್ವತಃ ನಮ್ಮ ಬಂಟ್ವಾಳದ ಜೊತೆ ಬೇಸರ ವ್ಯಕ್ತಪಡಿಸಿದ್ದಾರೆ. ವೇದವ್ಯಾಸ ಜೊತೆ ಅಗಮಿಸಿದ ಗೃಹ ರಕ್ಷಕದಳ ಕಮಾಂಡೆಂಟ್ ಅವರು ಇಪ್ಪತ್ತು ಸಾವಿರ ನಗದು ಹಾಗೂ ವೀರಕೇಸರಿ ಸಂಘಟನೆ ಹದಿನೈದು ಸಾವಿರ ರೂ ಜೊತೆಗೆ ಅನೇಕ ಸಂಘ ಸಂಸ್ಥೆಗಳು, ಪೋಲೀಸ್ ಸಿಬ್ಬಂದಿಗಳು ಮತ್ತು ಕೆಲವು ಮಂದಿ ವೈಯಕ್ತಿಕ ವಾಗಿ ಧನಸಹಾಯ ದಿನಬಳಕೆಯ ವಸ್ತುಗಳನ್ನು ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಆದರೆ ಕಾಲುಗಳಲ್ಲಿ ಬಲವಿಲ್ಲದೆ ನಡೆದಾಡಲು ಸಾಧ್ಯವಿಲ್ಲ ಹಾಗಾಗಿ ಶೀಘ್ರವಾಗಿ ಇವರಿಗೆ ಚಿಕಿತ್ಸೆ ಕೊಡಿಸುವ ಕೆಲಸ ಆಗಬೇಕಾಗಿದೆ, ಅವರ ಕಷ್ಟದ ಜೀವನಕ್ಕೆ ದಾರಿ ದೀಪವಾಗುವರು ಮುಂದೆ ಬರಬೇಕಾಗಿದೆ, ಅದಕ್ಕಾಗಿ ಅವರು ಕಾದು ಕುಳಿತಿದ್ದಾರೆ.