ಮಂಗಳೂರು: ಮಂಗಳೂರು-ಕೇರಳ ಹೆದ್ದಾರಿ ಓಪನ್ ಆಗಿಲ್ಲ. ಕೇಂದ್ರ ಸರ್ಕಾರ ಹೆದ್ದಾರಿ ತೆರವುಗೊಳಿಸುವ ಬಗ್ಗೆ ಮಾಹಿತಿ ಕೇಳಿದೆ. ಆದ್ರೆ ಸದ್ಯಕ್ಕೆ ಕೇರಳ ರಾಜ್ಯಕ್ಕೆ ಸಂಪರ್ಕ ಅಸಾಧ್ಯ ಎಂದು ದ.ಕ. ವಿಶೇಷ ನೋಡೆಲ್ ಆಫೀಸರ್ ವಿ. ಪೊನ್ನುರಾಜ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾಹಿತಿ ನೀಡಿದ ಅವ್ರು, ಕೇರಳದಿಂದ ಆಂಬುಲೆನ್ಸ್ ಗೂ ದ.ಕ. ಜಿಲ್ಲೆ ಪ್ರವೇಶವಿಲ್ಲ. ಯಾರಿಗಾದರೂ ಕೊರೊನಾ ಇದ್ದರೂ ಅಪಾಯವಾಗುತ್ತದೆ. ದ.ಕ. ಜಿಲ್ಲೆ ಮತ್ತು ಕೇರಳದ ನಡುವೆ 21 ಗಡಿಭಾಗಗಳಿವೆ. ಎಲ್ಲಾ ಗಡಿಭಾಗಗಳು ಬಂದ್ ಆಗಿವೆ ಎಂದು ತಿಳಿಸಿದ್ರು.