Thursday, October 19, 2023

ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ಕೆಲಸದ ಅವಧಿ ಸಮಯ ಬದಲಾವಣೆ: ಪದ್ಮನಾಭ ಕೊಟ್ಟಾರಿ

Must read

ಬಂಟ್ವಾಳ: ಕೊರೊನೊ ಜನತಾಕರ್ಪ್ಯೂ ನ ಹಿನ್ನೆಲೆಯಲ್ಲಿ ಜನರಿಗೆ ಸಹಕಾರ ನೀಡುವ ಉದ್ದೇಶದಿಂದ ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ಕೆಲಸದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಜನರ ಅನುಕೂಲದ ದೃಷ್ಟಿಯಿಂದ ಬೆಳಿಗ್ಗೆ ಗಂಟೆ 8 ರಿಂದ ಮಧ್ಯಾಹ್ನ 12 ಗಂಟೆಯವರಗೆ ತೆರೆದಿರುತ್ತದೆ. ಈ ಸಮಯದಲ್ಲಿ ಸಂಘದ ಕಚೇರಿಯ ಅಧೀನದಲ್ಲಿರುವ ರೇಷನ್ ಅಂಗಡಿಗಳು ಕೂಡಾ ತೆರೆದಿದ್ದು, ಜನರು ಈ ಸಮಯದಲ್ಲಿ ರೇಷನ್ ಪಡೆಯಲು ಅವರು ಕೋರಿದ್ದಾರೆ.
ಕಲ್ಲಡ್ಕದಲ್ಲಿ ರೈತರ ಸೇವಾ ಸಹಕಾರಿ ಸಂಘದ ಮಾತೃಸಂಸ್ಥೆಯಿದ್ದು, ಉಳಿದಂತೆ ವೀರಕಂಭ, ಬೋಳಂತೂರು ಹಾಗೂ ಅಮ್ಟೂರು ಈ ಮೂರು ಕಡೆಗಳಲ್ಲಿಯೂ ಒಂದೇ ರೀತಿಯ ಸಮಯ ನಿಗದಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ

More articles

Latest article