


ಬಂಟ್ವಾಳ: ಕೊರೊನೊ ಭೀತಿಯಿಂದ ಮಾ31 ರ ವರೆಗೆ ಕಂಪ್ಲೀಟ್ ಕರ್ನಾಟಕ ಲಾಕ್ ಮಾಡುವಂತೆ ಸರಕಾರ ನಿರ್ಧಾರ ಮಾಡಿದೆ ಸಂಜೆ ಅಧಿಕೃತವಾಗಿ ಈ ಬಗ್ಗೆ ತಿಳಿಸಲಾಗುವುದು ಎಂದು ಬಿ.ಎಸ್.ಯಡಿಯೂರಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪರಿಸ್ಥಿತಿ ಗಂಭೀರ ತೆ ಅರಿತು ಜನತೆ ಮನೆಯಲ್ಲಿಯೇ ಇರಿ ಎಂದು ರಾಜ್ಯದ ಜನತೆಗೆ ಕರ್ನಾಟಕ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.
ನಗರದಿಂದ ಹಳ್ಳಿ ಕಡೆಗೆ ಯಾರೂ ಕೂಡ ಹೋಗದಿರಿ.ಸೋಂಕಿತ ರ ಚಿಕಿತ್ಸೆ ಗೆ ಸರಕಾರದಿಂದ ನೆರವು ನೀಡಲಾಗುತ್ತಿದೆ.
ರಾಜ್ಯವೇ ಲಾಕ್ ಡೌನ್ ಅಗುವುದರಿಂದ ಬಡವರಿಗೆ ತೊಂದರೆ ಅಗುತ್ತದೆ. ಹಾಗಾಗಿ
ಬಡವರ ಹಿತದೃಷ್ಟಿಯಿಂದ
ಇಂದಿರಾ ಕ್ಯಾಂಟೀನ್ ನಲ್ಲಿ ಬಡವರಿಗೆ ಉಚಿತ ಊಟ ವಿತರಣೆ ಮಾಡಲಾಗುತ್ತದೆ.ಜನರು ಎಷ್ಟೇ ಹೇಳಿದರು ಮನೆಯಿಂದ ಹೊರಗೆ ಬರುತ್ತಿದ್ದಾರೆ ಹಾಗಾಗಿ ಈ ನಿರ್ಧಾರ ಕೈಗೊಳ್ಳಲಾಯಿತು.





