ಬಂಟ್ವಾಳ: ಕೇರಳ ರಾಜ್ಯದಲ್ಲಿ ಈಗಾಗಲೇ 6 ಕೊರೊನೊ ಪ್ರಕರಣಗಳು ದೃಡಪಟ್ಟ ಹಿನ್ನೆಲೆಯಲ್ಲಿ ಕೇರಳ ರಾಜ್ಯದ ಕಾಸರಗೋಡು ದಕ್ಷಿಣ ಕನ್ನಡ ಗಡಿ ಪ್ರದೇಶ ದ ಮಧ್ಯೆ ಸಂಚರಿಸುವ ರಸ್ತೆಯನ್ನು ನಾಳೆ ಶನಿವಾರ ಮಾ.21 ರ ಮದ್ಯಾಹ್ನ 2 ಗಂಟೆಯಿಂದ 31 ರ ಮಧ್ಯರಾತ್ರಿ ವರೆಗೆ ನಿಷೇಧ ಮಾಡಲಾಗಿದೆ.
ತುರ್ತು ಪರಿಸ್ಥಿತಿಯಲ್ಲಿ ಮಾತ್ರ ತಲಪಾಡಿ ಚೆಕ್ ಪೋಸ್ಟ್ ಮೂಲಕ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಕೊರೊನೊ ವೈರಸ್ ಹರಡಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಈ ರೀತಿ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಅವರು ತಿಳಿಸಿದ್ದಾರೆ.