ಬಾರೊ
ಹೋಳಿಯ ರಾಯ
ಕಾದೈತಿ ಮೈಮನವು
ಬಿಡದೆ ಸುಡತೈತಿ ನೆಲಮುಗಿಲು
ಬೇಗ ತಣ್ಣನೆಯ ಹೂ ಬೆಂಕಿ ಇಡೋ…!
ಕಡಲಾಗ ಕುಣಿತೀದಿ
ಮುಗಲಾಗ ಮೆರಿತೀದಿ
ಕಂಡ ಕಂಡವರ ಕಣ್ಣಾಗ ಹೊಳಿತೀದಿ
ನಿನ ಚೆಲುವು ನಮಗೂ ಕೊಡೋ..!
ನಿನ ಅಂದ ನಿನ ಚೆಂದ
ನಿನ ಹೊಳಪು ನಿನ ನುಣುಪು
ನಾರ್ಯಾರಿಗೆ ಕೊಟ್ಟು ನಂಮನ್ನ
ಕೈಬಿಟ್ಟಿ! ನಿಂದೇನು ಹೇಳ್ತಿ ಬಿಡೋ..?
ನಿನ ಬುದ್ಧಿ ನೋಡೀನೆ
ದಕ್ಷ ಹಾಕಿದ ಶಾಪ
ಬಿಡದಂಗ ಉಳಿಯೀತು ಜಗದಾಗ
ಇನ್ನಾದರೂ ಚೆಲುವು ನಮಗೇ ಕೊಡೋ…
✍ನೀ.ಶ್ರೀಶೈಲ ಹುಲ್ಲೂರು