ವಿಟ್ಲ: ಅಧ್ಯಾಪಕರ ಸಹಕಾರಿ ಸಂಘ ವಿಟ್ಲ ಇದರ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಕೆ.ರಮೇಶ್ ನಾಯಕ್ ರಾಯಿ, ಉಪಾಧ್ಯಕ್ಷರಾಗಿ
ರಾಜೇಂದ್ರ ರೈ ಅಳಿಕೆ ಆಯ್ಕೆಯಾಗಿದ್ದಾರೆ. ಉತ್ತಮ ಶಿಕ್ಷಕ ರಾಷ್ಟ್ರ ಪ್ರಶಸ್ತಿ ಪುರಸ್ಕ್ರತರಾದ ರಮೇಶ್ ರಾಯಿ ಎರಡನೇ ಬಾರಿಗೆ ಸಂಘದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ನೂತನ ಆಡಳಿತ ಮಂಡಳಿ ಅಧಿಕಾರ ಸ್ವೀಕಾರ ಕಾರ್ಯಕ್ರಮ ಸಂಘದ ಸಬಾಂಗಣದಲ್ಲಿ ನಡೆಯಿತು.
ಸಂಘದ ನಿರ್ದೇಶಕರುಗಳಾಗಿ ಸುರೇಶ್ ಕುಮಾರ್ ಪಿ.ಎಂ ಕುದ್ಮಾರು, ಇಂದುಶೇಖರ ಮಂಕುಡೆ ಮತ್ತು ಜಯರಾಮ ಹಳೆಯಂಗಡಿ, ಕಮಲಾಕ್ಷ ಶಂಭೂರು ಮತ್ತು ರಾಮಕೃಷ್ಣರಾವ್ ನರಿಕೊಂಬು, ಕೆ.ಎನ್ಗಂಗಾಧರ ಆಳ್ವ, ನವೀನ ಮಂಗಳೂರು, ಪುಷ್ಪರಾಜ್ ಬಿ. ಬಂಟ್ವಾಳ, ಉಮ್ಮರಗಿ ಶರಣಪ್ಪ ಕೆದಿಲ, ಮೋನಪ್ಪ ಕೆ.ಪುಂಜಾಲಕಟ್ಟೆ, ಸಂಜೀವ ಹೆಚ್. ಬೊಳಂತಿಮೊಗರು, ಚಿತ್ರಕಲಾ ಕೆ. ಕಟ್ಟತ್ತಿಲ ಮತ್ತು ಅನಿತಾ ಮಿನೇಜಸ್ ಕಣಿಯೂರು, ನವೀನ ಪಿ.ಎಸ್ ಕೊಡಂಗೆ ಮತ್ತು ಭಾರತಿ ಬ್ರಹ್ಮರಕೊಟ್ಲು ಆಯ್ಕೆಯಾದರು.
ರಿಟರ್ನಿಂಗ್ ಅಧಿಕಾರಿ ತ್ರಿವೇಣಿರಾವ್ ಮಾರ್ಗದರ್ಶನದಲ್ಲಿ ಚುನಾವಣೆ ಪ್ರಕ್ರಿಯೆ ನಡೆದವು. ಸಂಘದ ಜನರಲ್ ಮ್ಯಾನೇಜರ್ ಕೃಷ್ಣ ಪ್ರಕಾಶ್ ಉಪಸ್ಥಿತರಿದ್ದರು.