Wednesday, October 18, 2023

ಮಂಗಿಲಪದವು : ಕಬಡ್ಡಿ ಪಂದ್ಯಾಟ, ಸನ್ಮಾನ

Must read

ವಿಟ್ಲ : ಮಂಗಿಲಪದವು ನ್ಯಾಶನಲ್ ಯುವಕ ಮಂಡಲ ಇದರ ಆಶ್ರಯದಲ್ಲಿ 60 ಕೆ.ಜಿ.ವಿಭಾಗದ ಹಾಗೂ ಸ್ಥಳೀಯ ಆಟಗಾರರನ್ನೊಳಗೊಂಡ 6 ತಂಡಗಳ ಲೀಗ್ ಕಬಡ್ಡಿ ಪಂದ್ಯಾಟ ನಡೆಯಿತು.
ವಿಟ್ಲ ಪೊಲೀಸ್ ಠಾಣಾಧಿಕಾರಿಯಾಗಿ ನಿಯುಕ್ತಿಗೊಂಡ ವಿನೋದ್ ಎಸ್ ಅವರಿಗೆ ಅಭಿನಂದನಾ ಸಮಾರಂಭವು ಶುಕ್ರವಾರ ಮಂಗಿಲಪದವಿನಲ್ಲಿ ನಡೆಯಿತು.
ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿದ ವಿಟ್ಲ ಠಾಣಾಧಿಕಾರಿ ವಿನೋದ್.ಎಸ್ ಮಾತನಾಡಿ ಯುವಜನತೆ ಯಾವುದೇ ರೀತಿಯ ದುಶ್ಚಟ, ಸಮಾಜ ಬಾಹಿರ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳದೇ ಇಂತಹ ಕ್ರೀಡಾ ಕ್ಷೇತ್ರಗಳಲ್ಲಿ ಯಶಸ್ಸು ಗಳಿಸಿ ಉತ್ತಮವಾದ ಬದುಕು ರೂಪಿಸುವಂತಾಗಲಿ ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಯುವಕ ಮಂಡಲದ ಗೌರವಾಧ್ಯಕ್ಷ ಮಹಾಲಿಂಗ ಭಟ್ ಮಾತನಾಡಿದರು.
ವೀರಕಂಬ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲತಾ, ಸದಸ್ಯ ಉಬೈದ್.ಕೆ, ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಎಸೋಸಿಯೇಶನ್ ಕಾರ್ಯದರ್ಶಿ ಲತೀಫ್ ನೇರಳಕಟ್ಟೆ, ಸದಸ್ಯ ಕೆ.ಎಸ್.ಹಮೀದ್ ಕಂಬಳಬೆಟ್ಟು, ನ್ಯಾಯವಾದಿ ಆಲ್ವಿನ್ ಪ್ರಶಾಂತ್, ವಿಟ್ಲ ಠಾಣಾ ಸಿಬ್ಬಂದಿ ಸಂಜೀವ, ಯೂಸುಫ್ ಮಂಗಿಲಪದವು, ಸುಲೈಮಾನ್ ಒಕ್ಕೆತ್ತೂರು, ಹಿರಿಯ ಕಬಡ್ಡಿ ಆಟಗಾರರಾದ ಮಜೀದ್ ಮಾಣಿ, ಪದ್ಮನಾಭ ಕನಪಾದೆ ಹಾಗೂ ಇಕ್ಬಾಲ್ ಕೊಡಂಗೆ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪಂದ್ಯಾಟದ ಸಂಚಾಲಕ ಮುಹಮ್ಮದ್ ಶಾಲಿಹ್ ಸ್ವಾಗತಿಸಿದರು. ಯುವಕ ಮಂಡಲ ಉಪಾಧ್ಯಕ್ಷ ರಘುನಾಥ್ ಕೆಲಿಂಜ ವಂದಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

More articles

Latest article