ಮುಡಿಪು: ಇತ್ತೀಚೆಗೆ ನಿಧನರಾದ ಕುರ್ನಾಡು ವಲಯ ಕಾಂಗ್ರೆಸ್ ಅಧ್ಯಕ್ಷ, ಪಕ್ಷದ ಮುಖಂಡರಾಗಿದ್ದ ಜಗದೀಶ್ವರ ಭಟ್ ಕೊಡಕ್ಕಲ್ ಅವರಿಗೆ ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಶ್ರದ್ಧಾಂಜಲಿ ಸಭೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ಕಾಜವರ ನೇತೃತ್ವದಲ್ಲಿ ಮುಡಿಪಿನಲ್ಲಿ ನಡೆಯಿತು.
ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ಕಾಜವ, ತಾ.ಪಂ. ಸದಸ್ಯ ಹೈದರ್ ಕೈರಂಗಳ, ಇರಾ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಪಕ್ಷದ ಮುಖಂಡರಾದ ಉಮ್ಮರ್ ಪಜೀರ್, ಬಶೀರ್ ಮುಡಿಪು, ಸೂಫಿಕುಂಞಿ ಅವರು ಮೃತರ ಪ್ರಾಮಾಣಿಕತೆ, ಪಕ್ಷ ನಿಷ್ಠೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಪ್ರಮುಖರಾದ ದೇವದಾಸ ಭಂಡಾರಿ, ಪದ್ಮನಾಭ ನರಿಂಗಾನ, ನಾಸಿರ್ ನಡುಪದವು, ಸೀತಾರಾಮ ಶೆಟ್ಟಿ, ಜನಾರ್ದನ ಗಟ್ಟಿ, ಜಗದೀಶ್ ಪಲಾಯಿ, ಇಮ್ತಿಯಾಝ್ ಪಜೀರ್, ಮೊಯಿದಿನ್ ಅರ್ಕಾನ, ಫ್ಲೋರಿನ್ ಪಜೀರ್, ಲೊಲಾಕ್ಷಿ ಹಾಗೂ ಇನ್ನಿತರ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.