Tuesday, October 31, 2023

ಮಂಗಳೂರು ಖಾಸಗಿ ಬಸ್ ಚಾಲಕರ ಹೊಡೆದಾಟ

Must read

ಮಂಗಳೂರು: ಇಲ್ಲಿನ ಖಾಸಗಿ ಬಸ್ ಗಳ ಮಧ್ಯೆ ಟೈಮಿಂಗ್ ಹೆಸರಲ್ಲಿ ಗಲಾಟೆಗಳು ಸಾಮಾನ್ಯವಾಗಿದೆ. ಆದರೆ ಇಲ್ಲಿ ಖಾಸಗಿ ಬಸ್ಸಿನ ಚಾಲಕರಿಬ್ಬರು ನಡುಬೀದಿಯಲ್ಲಿ ಬಸ್ ನಿಲ್ಲಿಸಿ ಹೊಡೆದಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರದ ಬೆಂದೂರ್ ವೆಲ್ ಆಗ್ನೇಸ್ ಕಾಲೇಜಿನ ಎದುರಿನ ರಸ್ತೆ ಮಧ್ಯೆ ಬಸ್ ನಿಲ್ಲಿಸಿ ಎರಡೂ ಬಸ್ ಗಳ ಚಾಲಕರು ಹೊಡೆದಾಡಿದ್ದಾರೆ. ಇವರುಗಳ ಜಗಳ ಇತರ ವಾಹನ ಸವಾರರಿಗೂ ತೊಂದರೆ ಹಾಗೂ ಟ್ರಾಫಿಕ್ ಜಾಮ್ ಕೂಡಾ ಆಗಿದೆ. ಇದರಿಂದಾಗಿ ವಾಹನಗಳ ಚಾಲಕರು ದಬಾಯಿಸಿದಲ್ಲದೇ, ಕಾರು ಚಾಲಕನೊಬ್ಬ ಇಬ್ಬರನ್ನೂ ಎಳೆದು ಜಗಳ ಬಿಡಿಸಿದ್ದಾನೆ ಹಾಗೂ ರಸ್ತೆಯಿಂದ ಬಸ್ ತೆಗೆಯುವಂತೆ ದಬಾಯಿಸಿದ್ದಾನೆ. ಇಲ್ಲಿ ಬಸ್ ಚಾಲಕರು ಹೊಡೆದಾಡುತ್ತಿದ್ದರೆ, ಬಸ್ ನಿರ್ವಾಹಕರು ನಿಂತು ನೋಡುತ್ತಿದ್ದರು. ಚಾಲಕರ ಹೊಡೆದಾಟವನ್ನು ಕಾರಿನಲ್ಲಿದ್ದ ಪ್ರಯಾಣಿಕರು ಮೊಬೈಲಿನಲ್ಲಿ ಸೆರೆ ಹಿಡಿದಿದ್ದು ಡ್ರೈವರ್ ಗಳ ರಂಪಾಟ ಬೀದಿಗೆ ಬಂದಿದೆ.

More articles

Latest article