Thursday, October 26, 2023

ಫೆ.7: ಇಳಿಯೂರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಟ್ರಸ್ಟ್ ನ ಶ್ರೀ ನಾಗಬ್ರಹ್ಮ, ನಾಗ, ಕೊಡಮಣಿತ್ತಾಯ, ರಕ್ತೇಶ್ವರಿ ಕಲ್ಲುರ್ಟಿ, ಕಲ್ಕುಡ, ತಪಸ್ವೀಕಟ್ಟೆ, ಚಾಮುಂಡಿಗುಳಿಗ ಮತ್ತು ಗುಳಿಗ ದೈವಗಳ ಪ್ರತಿಷ್ಠಾಪನೆ ಮತ್ತು ಆಶ್ಲೇಷಬಲಿ

Must read

ಬಂಟ್ವಾಳ: ಮಣಿನಾಲ್ಕೂರು ಗ್ರಾಮದ ಇಳಿಯೂರು ಅಗರಗಂಡಿ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಟ್ರಸ್ಟ್ ನ ಶ್ರೀ ನಾಗಬ್ರಹ್ಮ, ನಾಗ ಕೊಡಮಣಿತ್ತಾಯ, ರಕ್ತೇಶ್ವರಿ ಕಲ್ಲುರ್ಟಿ, ಕಲ್ಕುಡ, ತಪಸ್ವೀಕಟ್ಟೆ, ಚಾಮುಂಡಿ ಗುಳಿಗ ಮತ್ತು ಗುಳಿಗ ದೈವಗಳ ಪ್ರತಿಷ್ಠಾಪನೆ ಮತ್ತು ಆಶ್ಲೇಷಬಲಿ ಫೆ.7 ರಂದು ಇಳಿಯೂರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜರಗಲಿದೆ.
ಫೆ.7. ರಂದು ಬೆಳಿಗ್ಗೆ ಗಣಪತಿ ಹೋಮ, ನಂತರ 9.44 ಕ್ಕೆ ಒದಗುವ ಮೀನ ಲಗ್ನದಲ್ಲಿ ನಾಗಪ್ರತಿಷ್ಠೆ ಹಾಗೂ ದೈವಗಳ ಪ್ರತಿಷ್ಠೆ, ಜೀವ ಕಲಶಾಭಿಷೇಕ, ಸಾನಿಧ್ಯ ಕಲಶಾಭಿಷೇಕ, ಆಶ್ಲೇಷ ಬಲಿ ಪೂಜೆ, ಮಹಾಪೂಜೆ, ನಾಗತಂಬಿಲ ನಂತರ ಮದ್ಯಾಹ್ನ 1 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಧಾನ ಅರ್ಚಕ ಎಲ್. ಗೋಪಾಲ ಕೃಷ್ಣ ಐತಾಳ್, ಅನುವಂಶಿಕ ಮೊಕ್ತೇಸರ ವಿಜಯ ಕುಮಾರ್‍ ಅಜಿಲ, ಜೀರ್ಣೋಧ್ದಾರ ಸಮಿತಿ ಗೌರಾವಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಹಾಗೂ ಬಲ್ಲೋಡಿಗುತ್ತು ಜೀರ್ಣೋಧ್ದಾರ ಸಮಿತಿ ಅಧ್ಯಕ್ಷ ಬಿ.ಪದ್ಮಶೇಖರ್‍ ಜೈನ್ ತಿಳಿಸಿದ್ದಾರೆ.

 

 

More articles

Latest article