Saturday, October 21, 2023

ಬೆಳ್ತಂಗಡಿ: ಸರಕಾರಿ ಆಸ್ಪತ್ರೆಯ ವೈದ್ಯ ಅರೆಸ್ಟ್

Must read

ಬೆಳ್ತಂಗಡಿ: ಚಿಕಿತ್ಸೆಗೆಂದು ತೆರಳಿದ ಯುವತಿಯೋರ್ವಳಿಗೆ ವೈದ್ಯರಿಂದ ಲೈಂಗಿಕ ಕಿರುಕುಳ ನೀಡಿದ ಹಿನ್ನೆಲೆ ಸರಕಾರಿ ಆಸ್ಪತ್ರೆಯ ವೈದ್ಯನನ್ನು ಬಂಧಿಸಿದ ಘಟನೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಾಲಾಗಿದೆ.
ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ವೈದ್ಯ ಡಾ. ಸುಧಾಕರ ಬಂಧಿತ ಆರೋಪಿ.
ಬೆಳ್ತಂಗಡಿ ತಾಲೂಕು ಕಸಬಾ ಗ್ರಾಮದ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಹಲ್ಲಿನ ಚಿಕಿತ್ಸೆಗೆಂದು ತೆರಳಿದ ಯುವತಿಗೆ ಅಲ್ಲಿನ ವೈದ್ಯ ಡಾ. ಸುಧಾಕರ ಚಿಕಿತ್ಸೆ ನೀಡುವ ಸಂದರ್ಭ ಕಿರುಕುಳ ನೀಡಿದ್ದಾರೆಂದು ಆಪಾದಿಸಿ ಯುವತಿ ನೀಡಿದ ದೂರಿನ ಹಿನ್ನೆಲೆ ಆರೋಪಿ ವೈದ್ಯನನ್ನು ಬಂಧಿಸಲಾಗಿದೆ.

More articles

Latest article