ಬಂಟ್ವಾಳ: ಜ.15 ರಂದು ಅಡ್ಯಾರಿನಲ್ಲಿ ನಡೆದ ಪೌರತ್ವ ಕಾಯಿದೆ ವಿರೋಧಿ ಪ್ರತಿಭಟನೆಯ ಸಂದರ್ಭ ಕುಂಬಾರ ಜನಾಂಗವನ್ನು ಅವಮಾನಿಸಿದುದಕ್ಕೆ ನ್ಯಾಯಕ್ಕಾಗಿ ಮನವಿ.
ಜ.15ರಂದು ಅಡ್ಯಾರಿನಲ್ಲಿ ನಡೆದ ಪೌರತ್ವ ಕಾಯಿದೆ ವಿರೋಧಿ ಪ್ರತಿಭಟನೆ ಸಂದರ್ಭ ವ್ಯಕ್ತಿಯೋರ್ವ “ಕುಂಬಾರನಿಗೆ ವರ್ಷ ಹರ್ಷನಿಗೆ ನಿಮಿಷ “ಎಂದು ಬರೆದ ಬ್ಯಾನರ್ ಪ್ರದರ್ಶಿಸಿ ಕುಂಬಾರ ಜನಾಂಗಕ್ಕೆ ಅವಮಾನ ಮಾಡಿದ್ದಾರೆ ಎನ್ನುವ ಹಿನ್ನೆಲೆಯಲ್ಲಿ ಸಂಬಂದಿತ ವ್ಯಕ್ತಿ ಹಾಗೂ ಸಹಕರಿಸಿದವರನ್ನು ಪತ್ತೆ ಹಚ್ಚಿ ಕಾನೂನು ಶಿಕ್ಷೆಗೆ ಒಳಪಡಿಸಬೇಕು. ಇಲ್ಲದೇ ಇದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂಬ ಮನವಿಯನ್ನು ದ. ಕ. ಜಿಲ್ಲಾಧಿಕಾರಿಗೆ ಬಂಟ್ವಾಳ ತಹಶೀಲ್ದಾರ್ ಮೂಲಕ ಹಾಗೂ ಪೊಲೀಸ್ ಆಯುಕ್ತರಿಗೆ ಬಂಟ್ವಾಳ ಠಾಣಾಧಿಕಾರಿ ಅವರ ಮೂಲಕ ಬಂಟ್ವಾಳ ಕುಲಾಲ ಯುವ ವೇದಿಕೆ ಹಾಗೂ ಬಂಟ್ವಾಳ ತಾಲೂಕು ಹಿರಿಯ ನಾಗರಿಕರ ಕ್ಷೇಮಾಭಿ ಕ್ಷೇಮಾಭಿವೃದ್ಧಿ ಸಂಘದ ನೇತ್ರತ್ವದಲ್ಲಿ ಸಲ್ಲಿಸಲಾಯಿತು.