ಬಂಟ್ವಾಳ, : ಸುಮಾರು ೬ ಕೋ.ರೂ.ವೆಚ್ಚದಲ್ಲಿ ಪುನರ್ ನಿರ್ಮಾಣಗೊಳ್ಳಲಿರುವ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಗರ್ಭಗುಡಿ ನಿರ್ಮಾಣದ ಗುತ್ತಿಗೆ ವಹಿಸಿಕೊಂಡ ಶಿಲ್ಪಿಗೆ ಮುಂಗಡ ಪಾವತಿ ಹಾಗೂ ಮುಂದಿನ ಕಾರ್ಯಗಳ ಸಮಾಲೋಚನೆಯು ರವಿವಾರ ಕ್ಷೇತ್ರದ ವಠಾರದಲ್ಲಿ ನಡೆಯಿತು.
ಕ್ಷೇತ್ರದ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ ಅವರು ಪ್ರಾರ್ಥನೆ ನೆರವೇರಿಸಿ, ಜೀರ್ಣೋದ್ಧಾರ ಸಮಿತಿಯ ಪ್ರಮುಖರು ಶಿಲ್ಪಿ ಎನ್.ಅಶೋಕ್ ಅವರಿಗೆ ಚೆಕ್ ಹಸ್ತಾಂತರಿಸಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎಂ.ಎಸ್.ಶೆಟ್ಟಿ ಸರಪಾಡಿ ಅವರು, ಆರ್ಥಿಕ ಕ್ರೊಢೀಕರಣ, ಮುಂದಿನ ಪಾದುಕಾನ್ಯಾಸ ಹಾಗೂ ಗರ್ಭನ್ಯಾಸ ಕಾರ್ಯದ ಕುರಿತು ವಿವರಿಸಿದರು.
ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಅವರು ಗರ್ಭಗುಡಿಯ ನಿರ್ಮಾಣದ ಕರಾರು ಪತ್ರದ ಕುರಿತು ವಿವರಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಮೊಕ್ತೇಸರರಾದ ಚಂದ್ರಹಾಸ ಶೆಟ್ಟಿ ಹೊಳ್ಳರಗುತ್ತು, ಉಮೇಶ್ ಆಳ್ವ ಕೊಟ್ಟುಂಜ, ಕೊರಗಪ್ಪ ಗೌಡ ಪಠಣ, ಗಿರಿಧರ್ ಎಸ್.ಮಠದಬೆಟ್ಟು, ದಯಾನಂದ ಕೋಡಿ, ಸುರೇಂದ್ರ ಪೈ ಸರಪಾಡಿ, ಜೀರ್ಣೋದ್ಧಾರ ಸಮಿತಿಯ ಕುಸುಮಾಕರ ಶೆಟ್ಟಿ ಕುರ್ಯಾಳ, ರಾಮಣ್ಣ ಶೆಟ್ಟಿ ಕಲ್ಲೊಟ್ಟೆ, ರಾಧಾಕೃಷ್ಣ ರೈ ಕೊಟ್ಟುಂಜ, ಸುಂದರ ಶೆಟ್ಟಿ ಕಲ್ಕೊಟ್ಟೆ, ಲೋಕೇಶ್ ಪೂಜಾರಿ ಎಕ್ಕುಡೇಲು, ಮೊದಲಾದವರಿದ್ದರು.
ಮೊಕ್ತೇಸರ ವಿಠಲ್ ಎಂ.ಆರುಮುಡಿ ಸ್ವಾಗತಿಸಿ, ವಂದಿಸಿದರು.