ಬಂಟ್ವಾಳ: ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಜೀಪಮುನ್ನೂರು ಗ್ರಾಮದ ನಂದಾವರ ಜುಮಾ ಮಸೀದಿಯ ಬಳಿ(ಪಾಣೆಮಂಗಳೂರು-ಮಾರ್ನಬೆÊಲು ರಸ್ತೆ) ಅನುಮತಿ ಪಡೆಯದೆ ಪ್ರತಿಭಟನೆ ಮಾಡಿದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾದ ಘಟನೆ ನಡೆದಿದೆ.
ನಂದಾವರ ಮಸೀದಿ ಬಳಿ ಶುಕ್ರವಾರ ಮಧ್ಯಾಹ್ನ ೧.೪೫ರ ವೇಳೆಗೆ ಮಸೀದಿಯ ಅಧ್ಯಕ್ಷ ಬಶೀರ್, ಮಸೀದಿಯ ಖತೀಬರಾದ ಅಬ್ದುಲ್ ಮಜೀದ್, ಅರೀಫ್ ನಂದಾವರ, ಸಜೀಪಮುನ್ನೂರು ಗ್ರಾ.ಪಂ.ಅಧ್ಯಕ್ಷ ಶರೀಫ್, ಮುಸ್ತಾಫ, ಮಸೀದಿ ಮಾಜಿ ಅಧ್ಯಕ್ಷ ಮಜೀದ್, ಅಬೂಬುಕ್ಕರ್ ಮತ್ತು ಇತರರು ಸೇರಿಕೊಂಡು ಧ್ವನಿವರ್ಧಕ ಬಳಸಿಕೊಂಡು ಸಾರ್ವಜನಿಕರಿಗೆ ಮತ್ತು ರಸ್ತೆಯಲ್ಲಿ ಓಡಾಡುವ ವಾಹನಗಳಿಗೆ ತೊಂದರೆ ನೀಡುವಂತೆ ಪ್ರತಿಭಟನೆ ಮಾಡಿದ್ದರು.
ಪ್ರತಿಭಟನೆ ಮಾಡದಂತೆ ಬಂಟ್ವಾಳ ನಗರ ಠಾಣಾ ಪಿಎಸ್ಐ ಅವರ ಸೂಚನೆಯನ್ನು ಲೆಕ್ಕಿಸದೇ ಧ್ವನಿವರ್ಧಕ ಬಳಕೆ ಮಾಡಿ ಅಕ್ರಮ ಕೂಟ ಸೇರಿ ಪ್ರತಿಭಟನೆ ಮಾಡಿದ್ದು, ಆರೋಪಿಗಳ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.