ಮಂಗಳೂರು: ಮಂಗಳೂರಿನಲ್ಲಿ ನಡೆದ ಗಲಭೆ ಮುಸ್ಲಿಂ ಯುವಕರ ಬಲಿ ಪಡೆಯಿತು. ಹಲವಾರು ಪ್ರತಿಭಟನಾಕಾರರು ಪೋಲೀಸರ ಲಾಟಿ ಏಟು ಹಾಗೂ ಗುಂಡಿನಿಂದಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಲಿಯಾದ ಯುವಕರ ಕುಟುಂಬ ಬೀದಿ ಪಾಲಾದರೂ ಒಂದೇ ಒಂದು ಮಾತನ್ನಾಡದ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರು ಕೋಮುವಾದಿ ಎನ್ನುವುದನ್ನು ಸಾಬೀತುಪಡಿಸಿದ್ದಾರೆ ಎನ್ನುವ ಆಡಿಯೋ ವೈರಲ್ ಆಗಿದೆ.
ಎನ್ ಆರ್ ಸಿ- ಸಿಎಎ ವಿರುದ್ದ ಒಂದು ಮಾತನ್ನೂ ಹೇಳದೆ ಎರಡು ಅಮಾಯಕ ಜೀವಗಳು ಗುಂಡೇಟಿಗೆ ಬಲಿಯಾಗಿದ್ದರೂ ಸಹ ಪೂಜಾರಿಯವರು ಮೌನ ಮುರಿಯಲಿಲ್ಲ. ಒಂದು ವೇಳೆ ಸಂಘ ಪರಿವಾರದ ಜೀವಗಳು ಪೋಲೀಸರ ಗುಂಡಿಗೆ ಬಲಿಯಾಗಿರುತ್ತಿದ್ದರೆ ಪತ್ರಿಕಾಗೋಷ್ಟಿ ಇರುತ್ತಿತ್ತು. ಇಂತಹ ಜಾತ್ಯಾತೀತ ನಾಯಕರ ಬಗ್ಗೆ ಕಾಂಗ್ರೆಸ್ ನ ಕಾರ್ಯಕರ್ತ ಹಕೀಂ ಸೆಹೆಲಿ ಹಲವು ವರ್ಷಗಳ ಹಿಂದೆಯೇ ಆರೋಪಿಸುತ್ತಾ ಬಂದಿದ್ದಾರೆ. ಅದು ಈಗ ಸತ್ಯವಾಗ್ತಾ ಇದೆ. ಹಕೀಂ ಸೆಹೆಲಿ ಪುತ್ತೂರು ಅವರ ಆರೋಪ ಖಂಡಿತವಾಗಿಯೂ ಸತ್ಯಕ್ಕೆ ದೂರವಾದದ್ದಲ್ಲ ಎಂಬುವುದು ಪೂಜಾರಿಯವರ ಮೌನ ತಿಳಿಸುತ್ತದೆ.
ಒಂದು ಕಾಲದಲ್ಲಿ ಮುಸಲ್ಮಾನರು ಈ ಪೂಜಾರಿಯವರಿಗೆ ಅಭಿಮಾನದಿಂದ ಓಟು ಕೊಟ್ಟು ಗೆಲ್ಲಿಸಿದ್ದಾರೆ. ಅದರೆ ಅವರು ಕೃತಜ್ನತೆಗೆ ಬದಲು ಮುಸಲ್ಮಾನರಿಗೆ ಶಾಪವಾಗಿ ಬಂದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಸನ್ಮಾನ್ಯ ಸಿದ್ದರಾಮಯ್ಯನವರನ್ನು ಟೀಕಿಸುತ್ತಾ ಬಂದ ಪೂಜಾರಿಗೆ ಸಿದ್ದರಾಮಯ್ಯನವರ ಬಗ್ಗೆ ಮಾತೆತ್ತಲೂ ಯೋಗ್ಯರಲ್ಲ ಎಂದು ಪುಜಾರಿಗೆ ಅರ್ಥವಾಗಬೇಕಾಗಿದೆ. ಏನೇ ಆಗಲಿ ಜನಾರ್ದನ ಪೂಜಾರಿ ಜಾತ್ಯಾತೀತ ಮನೋಭಾವದವರಲ್ಲ. ಜಾತ್ಯಾತೀತಕ್ಕೂ ಪೂಜಾರಿಗೂ ಅಜಗಜಾಂತರವಾದ ವ್ಯತ್ಯಾಸಗಳಿವೆ. ಮುಸಲ್ಮಾನರ ಮತ ಗಳಿಸಿ ಕೇಂದ್ರದಲ್ಲಿ ಮಂತ್ರಿಯಾದವರು ಪೂಜಾರಿಯವರು. ಇಂತಹ ಒಂದು ಆಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪೂಜಾರಿಯವರಿಗೆ ಮುಸ್ಲಿಮರು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ.