ಬಂಟ್ವಾಳ: ಬಂಟ್ವಾಳ ತಾಲೂಕಿಗೆ ಸಂಬಂಧಿಸಿದಂತೆ ಭೂಮಿ ಶಾಖೆಯಲ್ಲಿ ಸರಿ ಸುಮಾರು 2,00,000 ಪಹಣಿಗೆ ಡಿಜಿಟಲ್ ಸಹಿ ಪ್ರಕ್ರಿಯೆ ನಡೆಯಲಿರುವುದರಿಂದ ಜ.1 ರಿಂದ 10ರ ವರೆಗೆ ಭೂಮಿ ಶಾಖೆ, ಅರ್ಜಿ ಕಿಯೋಸ್ಕ್ ಮತ್ತು ಪಹಣಿ ವಿತರಣಾ ಕೆಲಸ ಕಾರ್ಯಗಳು ಸ್ಥಗಿತಗೊಳಿಸಲಾಗಿದೆ. ಸಾರ್ವಜನಿಕರು ಸಹಕಾರ ನೀಡುವಂತೆ ತಹಶೀಲ್ದಾರ್ ಎಸ್. ಆರ್.ರಶ್ಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.