ಬಂಟ್ವಾಳ: ಕೇಂದ್ರ ಸರಕಾರ ಜಾರಿಗೆ ತಂದಿರುವ ಎನ್ಆರ್ಸಿ ಮತ್ತು ಸಿಎಎ ವಿರುದ್ಧ ಹಾಗೂ ಮಂಗಳೂರು ಪೊಲೀಸ್ ದೌರ್ಜನ್ಯ ಖಂಡಿಸಿ ತಲಪಾಡಿ ಜಮಾಅತ್ ವತಿಯಿಂದ ಭಿತ್ತಿಪತ್ರ ಪ್ರದರ್ಶನ, ಕಾರ್ನರ್ ಮೀಟ್ ಕಾರ್ಯಕ್ರಮ ತಲಪಾಡಿ ಮಸೀದಿ ವಠಾರದಲ್ಲಿ ನಡೆಯಿತು.
ಪೌರತ್ವ ಕಾಯ್ದೆ ವಿರೋಧಿಸಿ ಸಂವಿಧಾನ ಉಳಿಸಿ ಎಂದು ಘೋಷಣೆಗಳನ್ನು ಪ್ರತಿಭಟನಕಾರರು ಕೂಗಿದರು. ಸಾಮಾಜಿಕ ಕಾರ್ಯಕರ್ತ ಮುಸ್ತಾಕ್ ತಲಪಾಡಿ ಪ್ರಸ್ತುತ ಸನ್ನಿವೇಶಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶಾಹುಲ್ ಹಮೀದ್ ತಲಪಾಡಿ, ಅಶ್ರಫ್ ಬಿ.ಎಂ.ಟಿ., ಅನ್ವರ್ ಕೆ.ಎಚ್., ಶಬೀರ್, ಸವಾಜ್, ಇರ್ಷಾದ್, ಸಲಾಂ, ಕಮರುದ್ದೀನ್, ಅಶ್ಪಾಕ್, ಆಸಿಫ್ ಆರ್.ಕೆ., ಹಾರಿಸ್, ಆರಿಫ್ ಮತ್ತಿತರರಿದ್ದರು.