Tuesday, October 17, 2023

ಜ.6-ಜ.11 : ಆಧಾರ್ ಕಾರ್ಡ್ ಪರಿಷ್ಕರಣೆ ಮತ್ತು ಹೊಸ ಆಧಾರ್ ಕಾರ್ಡ್ ನೋಂದಣಿ ಶಿಬಿರ

Must read

ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಮನವಿಯ ಮೇರೆಗೆ ಆಧಾರ್ ಕಾರ್ಡ್ ಪರಿಷ್ಕರಣೆ ಮತ್ತು ಹೊಸ ಆಧಾರ್ ಕಾರ್ಡ್ ನೋಂದಣಿ ಶಿಬಿರ ನಡೆಯಲಿದೆ. ಇದರಂತೆ ಪುತ್ತೂರು ಅಂಚೆ ವಿಭಾಗ ವತಿಯಿಂದ ಜ.6 ಮತ್ತು ಜ.7 ರಂದು ಬಿ.ಸಿ.ರೋಡಿನ ಸಾಮರ್ಧ್ಯ ಸೌಧದಲ್ಲಿ, ಜ.8 ಮತ್ತು ಜ.9 ರಂದು ಮಂಚಿ ಗ್ರಾಮ ಪಂಚಾಯತ್ ಹಾಲ್ ನಲ್ಲಿ ಹಾಗೂ ಜ.10 ಮತ್ತು ಜ.11 ರಂದು ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ಹಾಲ್‌ನಲ್ಲಿ ಆಧಾರ್ ಕಾರ್ಡ್ ಪರಿಷ್ಕರಣೆ ಮತ್ತು ಹೊಸ ಆಧಾರ್ ಕಾರ್ಡ್ ನೋಂದಣಿ ಶಿಬಿರವನ್ನು ಆಯೋಜಿಸಲಾಗಿದೆ.
ಇದರೊಂದಿಗೆ, ಅಂಚೆ ಇಲಾಖೆಯ ಇನ್ನಿತರ ಸೇವೆಗಳಾದ, ಅಂಚೆ ಉಳಿತಾಯ ಖಾತೆಗಳು, ಸುಕನ್ಯಾ ಸಮೃದ್ದಿ ಯೋಜನೆ, ಜೀವ ವಿಮೆ, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಹಾಗೂ ಮಾನ್ಯ ಪ್ರಧಾನ ಮಂತ್ರಿಗಳ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ್ ಭೀಮಾ ಯೋಜನೆ, ಅಟಲ್ ಪೆನ್ಶನ್ ಯೋಜನೆ ಮತ್ತು ಇನ್ನಿತರ ಸೇವೆಗಳ ಕುರಿತು ಮಾಹಿತಿ ಮತ್ತು ಸ್ಥಳದಲ್ಲೇ ಖಾತೆ ತೆರೆಯುವ ಸೌಲಭ್ಯವನ್ನು ಒದಗಿಸಲಾಗುವುದು.
ಈ ಶಿಬಿರದಲ್ಲಿ ಅಂಚೆ ಇಲಾಖೆಯಿಂದ ನಿಯೋಜಿಸಲಾದ ಸಿಬ್ಬಂದಿಗಳು ಈ ಮೇಲಿನ ಸೇವೆಗಳನ್ನು ಒದಗಿಸಲಿದ್ದಾರೆಂದು ಶಾಸಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

More articles

Latest article