ಬಂಟ್ವಾಳ: ಮೆಸ್ಕಾಂನ ವಿದ್ಯುತ್ ಬಿಲ್ ಪಾವತಿಗೆ ಬಾಕಿಯಿದ್ದ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಹಿಂತಿರುಗುತ್ತಿದ್ದ ಮೆಸ್ಕಾಂ ಸಿಬ್ಬಂದಿಗೆ ಆರೋಪಿ ಗ್ರಾಹಕ ಹಲ್ಲೆ ನಡೆಸಿದ ಘಟನೆ ಮಂಗಳವಾರ ನಂದಾವರ ಜಂಕ್ಷನ್ನಲ್ಲಿ ನಡೆದಿದೆ.
ನಂದಾವರ ಮಸೀದಿ ಬಿಲ್ಡಿಂಗ್ ನಿವಾಸಿ ಖಾಲಿದ್ ಹಲ್ಲೆ ನಡೆಸಿರುವ ಆರೋಪಿ. ಮೆಸ್ಕಾಂನ ಮೆಕ್ಯಾನಿಕ್-2 ಆಗಿರುವ ಸುರೇಶ್ ನಾಯಕ್ ಹಾಗೂ ಲೈನ್ಮ್ಯಾನ್ ವೀರಭದ್ರ ಅವರು ಆರೋಪಿ ಖಾಲಿದ್ ಮೆಸ್ಕಾಂ ಬಿಲ್ ಪಾವತಿಸಿಲ್ಲ ಎಂದು ಆತನ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಹಿಂತಿರುತ್ತಿದ್ದ ವೇಳೆಗೆ, ಖಾಲಿದ್ ಇವರಿಬ್ಬರನ್ನು ನಂದಾವರ ಜಂಕ್ಷನ್ನಲ್ಲಿ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಲ್ಲಿಸಿ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.
ಹಲ್ಲೆಯಿಂದ ಗಾಯಗೊಂಡಿರುವ ಮೆಸ್ಕಾಂ ಸಿಬ್ಬಂದಿ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.