ವಿಟ್ಲ: ಬೊಳ್ನಾಡು ಶ್ರೀಭಗವತಿ ಕ್ಷೇತ್ರಕ್ಕೆ ಸಂಬಂಧಪಟ್ಟ ಪ್ರಮುಖ ತರವಾಡುಗಳಲ್ಲೊಂದಾದ ಬೊಳ್ನಾಡು ಚೆಲ್ಲಡ್ಕ ಪುಲ್ಲಂತೀಯ ತರವಾಡಿನ ದೈವಸಾನಿಧ್ಯ ನಿರ್ಮಾಣಕ್ಕೆ ಏರಿಯಕೋಟ ಚಂದ್ರಶೇಖರ ಕಾರ್ನವರ್, ಆಚಾರಪಟ್ಟವರಾದ ಗೋಪಾಲ ಬೆಳ್ಚಪ್ಪಾಡರವರ ಮಾರ್ಗದರ್ಶನದಲ್ಲಿ ಶಿಲ್ಪಿಗಳಾದ ಕುಂಞರಾಮ ಆಚಾರ್ಯ ಮಧೂರು ಇವರ ನೇತೃತ್ವದಲ್ಲಿ ಶಿಲಾನ್ಯಾಸ ನೆರವೇರಿತು.
ಈ ಸಂದರ್ಭದಲ್ಲಿ ರಾಘವ ಗುರಿಕಾರ, ನಾಗೇಶ ಗುರಿಕಾರ, ಬೊಳ್ನಾಡು ಭಗವತೀಕ್ಷೇತ್ರ ಪುನರ್ ನಿರ್ಮಾಣ ಸಮಿತಿ ಪ್ರಧಾನ ಕಾರ್ಯದರ್ಶಿ ಅನಂದಕಲ್ಲಕಟ್ಟ, ಬೊಳ್ನಾಡು ತೀಯ ಸಮಾಜ ಸೇವಾ ಸಮಿತಿ ಕೋಶಾಧಿಕಾರಿ ಚಂದ್ರಶೇಖರ ಮಡಿಯಾಲ, ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ, ಅಳಿಕೆಗುತ್ತು ರೂಪೇಶ್ ರೈ, ಬಾಲಕೃಷ್ಣ ಪೂಜಾರಿ ಸಣ್ಣಗುತ್ತು, ಅಣ್ಣುಕುಲಾಲ್ ಅಳಿಕೆ, ತರವಾಡು ಸಮಿತಿ ಅಧ್ಯಕ್ಷ ಮಾಧವ ಸಿಂಹಮೂಲೆ, ಸಮಿತಿಯ ಪದಾಧಿಕಾರಿಗಳು, ಮಹಿಳಾ ಸಮಿತಿಯ ಪದಾಧಿಕಾರಿಗಳು, ಬಂಧು ಭಗಿನಿಯರು ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಸದಾಶಿವ ಅಳಿಕೆ ಕಾರ್ಯಕ್ರಮ ನಿರೂಪಿಸಿದರು.