ಬಂಟ್ವಾಳ: ಶಂಭೂರು ಗ್ರಾಮಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ನೀರಿನ ಶೇಕರಣೆಗೆ ಗ್ರಾಮದ ಮುಂಡ ಜೋರ ಎಂಬಲ್ಲಿ 1.50 ಲಕ್ಷ ಲೀಟರಿನ ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ನ.4ರಂದು ಗುದ್ದಲಿ ಪೂಜೆ ಮಾಡಲಾಯಿತು. ಸುಮಾರು 7ಲಕ್ಷ ರೂಪಾಯಿ ಅಂದಾಜು ವೆಚ್ಚ ಹೊಂದಿದ್ದು, ಈ ಸಂಧರ್ಭ ಜಿಲ್ಲಾ ಪಂಚಾಯತ್ ಸದಸ್ಯರಾದ ಕಮಲಾಕ್ಷಿ ಕೆ. ಪೂಜಾರಿ ಪಂಚಾಯತ್ ಅಧ್ಯಕ್ಷರಾದ ಯಶೋಧರ ಕರ್ಬೆಟ್ಟು, ಸದಸ್ಯರಾದ ದಿವಾಕರ ಶಂಭೂರು, ಉದಯ ಶಾಂತಿಲ, ಜಯರಾಜ್ ಕೊಪ್ಪಲ, ಕಿಶೋರ್ ಶೆಟ್ಟಿ ಅಂತರ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಆನಂದ ಪಿ.ಶಂಭೂರು ಗುತ್ತಿಗೆದಾರರಾದ ನಾಗೇಶ್ ನಾಯಿಲ ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.