ಶ್ರೀರಾಮ ಪ್ರಥಮ ದರ್ಜೆ ಕಾಲೇಜು ಮತ್ತು ಪದವಿ ಪೂರ್ವ ಕಾಲೇಜು ವಿಭಾಗದ ಕಾಲೇಜ್ ಅಭಿವೃದ್ಧಿ ಸಮಿತಿ ಹಿರಿಯರ ಸಮ್ಮುಖದಲ್ಲಿ ಇಂದು ರಚನೆ ಆಯಿತು.
ಪದವಿ ವಿಭಾಗದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ನಾಗೇಶ್ ಇರಾ., ಕಾರ್ಯದರ್ಶಿಯಾಗಿಪೂರ್ಣಶ್ರಿ ಅವಿರೋಧವಾಗಿ ಆಯ್ಕೆಯಾದರು.ಸಂಸ್ಥೆಯ ಸ್ಥಾಪಕರಾದ ಪ್ರಭಾಕರ್ ಭಟ್, ಸಂಚಾಲಕರಾದ ವಸಂತ ಮಾಧವ ಸಭೆಯಲ್ಲಿ ಉಪಸ್ಥಿತರಿದ್ದರು. ಪದವಿ ವಿಭಾಗದ ಪ್ರಾಚಾರ್ಯರಾದ ಕೃಷ್ಣಪ್ರಸಾದ್ ಕಾಯರ್ಕಟ್ಟೆ, ಪದವಿಪೂರ್ವ ವಿಭಾಗದ ಪ್ರಾಚಾರ್ಯರಾದ ವಸಂತ ಬಲ್ಲಾಳ್, ಉಪನ್ಯಾಸಕಿಯರಾದ ಕವಿತಾ, ಶುಭಲತ,ಶೋಭಾ ಸಭೆಯಲ್ಲಿ ಉಪಸ್ಥಿತರಿದ್ದರು. ಪದವಿ ಪ್ರಾಚಾರ್ಯರಾದ ಕೃಷ್ಣಪ್ರಸಾದ್ ಕಾಯಾರ್ಕಟ್ಟೆ ಸ್ವಾಗತಿಸಿ ,ಯತಿರಾಜ್ ವಂದಿಸಿದರು