ಪೆರುವಾಯಿ : ಪೆರುವಾಯಿ ಸ.ಹಿ.ಪ್ರಾ.ಶಾಲೆ ಮೂಡಂಬೈಲು ಇಲ್ಲಿ ಜರಗಿದ ಉದಯಗಿರಿ ಕ್ಲಸ್ಟರ್ ಮಟ್ಟದ 2019-20ನೇ ಸಾಲಿನ ಪ್ರತಿಭಾ ಕಾರಂಜಿಯಲ್ಲಿ ಪೆರುವಾಯಿ ಅ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳು ಕಿರಿಯ, ಹಿರಿಯ ವಿಭಾಗದ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.
ಕಿರಿಯರ ವಿಭಾಗ : ಶ್ರೇಯಾ ಚೌಟ ೪ನೇ ತರಗತಿ (ಸಂಸ್ಕೃತ ಕಂಠ ಪಾಠ -ಪ್ರಥಮ), ಗ್ರೀಷ್ಮಾ 4ನೇ (ಮರಾಟಿ ಕಂಠಪಾಠ ಪ್ರಥಮ), ಜಿ ಪ್ರಜ್ವಲ್ರಾಜ್ 4ನೇ (ತುಳು ಕಂಠ ಪಾಠ ಪ್ರಥಮ, ಆಶು ಭಾಷಣ ದ್ವಿತೀಯ ರಸ ಪ್ರಶ್ನೆ ದ್ವಿತೀಯ), ಮೂಸಾ ಅಪ್ನಾಝ್ 4ನೇ (ಅರೇಬಿಕ್ ಪಠಣ ಪ್ರಥಮ, ರಸ ಪ್ರಶ್ನೆ ದ್ವಿತೀಯ), ಅಂಕಿತಾ 4ನೇ (ತೆಲುಗು ಕಂಠಪಾಠ ದ್ವಿತೀಯ), ನಿಖಿತಾ ಯು.ಕೆ 4ನೇ (ಲಘು ಸಂಗೀತ ತೃತೀಯ) ಯಶ್ವಿತ್ ಎಂ ಆಚಾರ್ಯ ಮತ್ತು ಬಳಗ (ಅಬ್ದುಲ್ ಹಾದಿ, ವಿನಾಯಕ,ಚರಣ್ ನಾಯ್ಕ 4ನೇ ರಸಪ್ರಶ್ನೆ ದ್ವಿತೀಯ)
ಹಿರಿಯರ ವಿಭಾಗ : ವೀಕ್ಷಿತ 7ನೇ ತರಗತಿ (ಯಕ್ಷಗಾನ ಪ್ರಥಮ, ಸಂಸ್ಕೃತ ಪಠಣ ದ್ವಿತೀಯ) ಚಿಂತನ 7ನೇ (ಆಶು ಭಾಷಣ ತೃತೀಯ), ಚೈತನ್ಯ 6ನೇ ( ಕನ್ನಡ ಕಂಠಪಾಠ ಪ್ರಥಮ), ಕೀರ್ತನ್ ಶೆಣೈ 7ನೇ (ಹಿಂದಿ ಕಂಠಪಾಠ ತೃತೀಯ) ಪ್ರಥಮ ಸ್ಥಾನ ಗಳಿಸಿದ 6 ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.