


ಬಂಟ್ವಾಳ: ಬಂಟ್ವಾಳ ತಾಲೂಕಿನ್ಯಾದ್ಯಂತ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಬಾಲ್ಯ ವಿವಾಹ ತಡೆ ಪ್ರಕರಣ. ಬಾಲ್ಯ ವಿವಾಹ ಕಾನೂನಿನಲ್ಲಿ ಅಪರಾಧ ಎಂದು ಗೊತ್ತಿದ್ದರೂ ಕೂಡಾ ಮದುವೆ ಮಾಡಿಸುವ ಕುಟುಂಬಗಳು ಈ ಶತಮಾನದಲ್ಲೂ ಇದೆ ಎಂಬುದಕ್ಕೆ ತಾಲ್ಲೂಕಿನ ಲ್ಲಿ ಒಂದೇ ತಿಂಗಳಿನಲ್ಲಿ ಬೆಳಕಿಗೆ ಬಂದ ಎರಡು ಪ್ರಕರಣಗಳು ಸಾಕ್ಷಿಯಾಗಿದೆ.
ಅಗಸ್ಟ್ ತಿಂಗಳ 19 ರಂದು ನಾವೂರ ಗ್ರಾಮದಲ್ಲಿ ಬಾಲ್ಯವಿವಾಹದ ನಿಶ್ಚಿತಾರ್ಥಕ್ಕೆ ಬ್ರೇಕ್ ಹಾಕಿದ ಅಧಿಕಾರಿಗಳು ವಿಟ್ಲ ಸಿ.ಡಿ.ಪಿ.ಒ.ಕಚೇರಿಗೆ ಬರುವ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಯೂ ಇದೇ ರೀತಿ ಯ ಪ್ರಕರಣಕ್ಕೆ ತಡೆ ಹಿಡಿದ್ದಾರೆ.
ಅಗಸ್ಟ್ 23 ಕೃಷ್ಣ ಜನ್ಮಾಷ್ಟಮಿ ದಿನದಂದು ಬೊಳಂತೂರು ಗ್ರಾಮದಲ್ಲಿ ಅಪ್ರಾತ್ತ ಬಾಲಕಿಗೆ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮ ನಡೆಸುವ ತಯಾರಿ ನಡೆಸಿದ್ದರು.
ಬಾಲಕಿಗೆ 17ವರ್ಷ 6 ತಿಂಗಳು ತುಂಬುತ್ತಿರುವಾಗಲೇ ಮದುವೆ ಮಾಡಲು ಪೂರ್ವತಯಾರಿಯಲ್ಲಿದ್ದ ಕುಟುಂಬ ಅ.23 ಮನೆಯಲ್ಲಿ ನಿಶ್ಚಿತಾರ್ಥ ಮಾಡುವ ತಯಾರಿಯಲ್ಲಿದ್ದರು.
ಈ ಬಗ್ಗೆ ಖಚಿತ ಮಾಹಿತಿಯ ಪಡೆದ ಅಧಿಕಾರ ಗಳು ಮನೆಗೆ ಧಾವಿಸಿ ಹುಡುಗಿಗೆ 18 ವರ್ಷ ತುಂಬದೆ ನಿಶ್ಚಿತಾರ್ಥ ಕೂಡಾ ಕಾನೂನಿನ ಪ್ರಕಾರ ಅಪರಾಧವಾಗುವುದರಿಂದ ನಿಶ್ಚಿತಾರ್ಥ ವನ್ನು ನಿಲ್ಲಿಸುವಂತೆ ಹೇಳಿದರು.
ಬಳಿಕ 18 ವರ್ಷ ತುಂಬುವರಗೆ ಮದುವೆಗೆ ಸಂಬಂಧಸಿದ ಯಾವುದೇ ಕಾರ್ಯಕ್ರಮ ಮಾಡುವುದಿಲ್ಲ ಎಂಬ ಬಗ್ಗೆ ಮುಚ್ಚಳಿಕೆ ಬರೆಯಿಸಿದ್ದಾರೆ.
ಬೆರಳೆಣಿಕೆಯ ಕೆಲವೊಂದು ಕುಟುಂಬಗಳ ಪ್ರಕರಣಗಳು ಬೆಳಕಿಗೆ ಬಂದರೆ ಅನೇಕ ಪ್ರಕರಣಗಳು ಇನ್ನೂ ಕೂಡಾ ಬೆಳಕಿಗೆ ಬರದೆ ಮದುವೆ ನಡೆದಿರಬಹುದು.
ವಿಟ್ಲ ಸಿಡಿಪಿಒ ಸುಧಾಜೋಶಿ ಮಂಗಳೂರು ರಕ್ಷಣಾ ಘಟಕದ ಅಧಿಕಾರಿ ಶಿವಾನಂದ, ಬೊಳಂತರೂ ಗ್ರಾ.ಪಂ.ಪಿಡಿಒ ಪುಷ್ಪಾ , ವಿಟ್ಲ ಠಾಣಾ ಪೋಲೀಸ್ ಸಿಬ್ಬಂದಿ ಗಳು ಮನೆಗೆ ಬೇಟಿ ನೀಡಿದ್ದರು.





