Friday, October 27, 2023

ನಿಲ್ಲಿಸಿದ್ದ ರಿಕ್ಷಾಕ್ಕೆ ಕಾರು ಡಿಕ್ಕಿ ಮೂವರಿಗೆ ಗಾಯ

Must read

ಬಂಟ್ವಾಳ: ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಿಲ್ಲಿಸಿದ ಅಟೋ ರಿಕ್ಷಾಕ್ಕೆ ಹಿಂದುಗಡೆಯಿಂದ ಕಾರೊಂದು ಡಿಕ್ಕಿಯಾದ ಘಟನೆ ಮಾಣಿ ಸಮೀಪದ ಗಡಿಯಾರ ಸಮೀಪ ನಡೆದಿದೆ .

ಉಪ್ಪಿನಂಗಡಿ ಕಡೆಯಿಂದ ಬರುತ್ತಿದ್ದ ಬೆಂಗಳೂರು ಮೂಲದ ಕಾರು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ರಿಕ್ಷಾಕ್ಕೆ ಡಿಕ್ಕಿಯಾಗಿದೆ.
ಎರಡು
ವಾಹನಗಳು ಡಿಕ್ಕಿಯಾಗಿ ರಿಕ್ಷಾ ಚಾಲಕ ಆಪತ್ಬಾಂದವ ಗಡಿಯಾರ ಪುತ್ತಾಕ ಗಂಭೀರ ಗಾಯಗೊಂಡು ರಿಕ್ಷಾದಲ್ಲಿದ್ದ ಮಹಿಳೆಯರಿಬ್ಬರು ಸಣ್ಣಪುಟ್ಟ ಗಾಯಗೊಂಡು ತುಂಬೆ ಆಸ್ಪತ್ರೆಗೆ ದಾಖಲಿಸಲಾಗಿದೆ.

More articles

Latest article