ಕಲ್ಲಡ್ಕ: ಶ್ರೀ ರಾಮ ಮಂದಿರ ರಾಮನಗರ, ಕಲ್ಲಡ್ಕ ಹನುಮಜ್ಜಯಂತಿ ಉತ್ಸವವು ಏ.19ನೇ ಶುಕ್ರವಾರ ನಡೆಯಲಿದೆ.
ಏ.19ರಂದು ಬೆಳಿಗ್ಗೆ ಸೂರ್ಯೋದಯಕ್ಕೆ ದೇವರಿಗೆ ಮಂಗಳಾರತಿ, ಬೆಳಿಗ್ಗೆ 6 ರಿಂದ 8 ರವರೆಗೆ ಶ್ರೀ ಹನುಮಂತ ದೇವರಿಗೆ ಪಂಚಾಮೃತ ಅಭಿಷೇಕ, ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಶ್ರೀ ಹನುಮಂತ ದೇವರಿಗೆ ತೈಲಾಭಿಷೇಕ ಶ್ರೀ ರಾಮಚಂದ್ರ ದೇವರಿಗೆ ನಿರಂತರ ಸೀಯಾಳಭಿಷೇಕ ಸಾಮೂಹಿಕ ಲಲಿತಾ ಸಹಸ್ರನಾಮ ಪಠಣ, ಸಂಜೆ 5.30ರಿಂದ 6.30ರ ವರೆಗೆ ಭಜನೆ, 6.30ರಿಂದ ಸಾಮೂಹಿಕ ಹನುಮಾನ್ ಚಾಲೀಸ್ ಪಠಣ ಬಳಿಕ ಮಹಾಮಂಗಳಾರತಿ ನಡೆಯಲಿದೆ ಎಂದು ಶ್ರೀ ರಾಮಾಂಜನೇಯ ಸೇವಾ ಟ್ರಸ್ಟ್ (ರಿ.)ನ ಅಧ್ಯಕ್ಷರು ಡಾ|| ಪ್ರಭಾಕರ ಭಟ್ ಕಲ್ಲಡ್ಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.