ಬಂಟ್ವಾಳ: ಸಂಜೆ ಸುರಿದ ಬಾರೀ ಗಾಳಿ ಮಳೆಗೆ ಮನೆಯೊಂದಕ್ಕೆ ತೆಂಗಿನಮರ ಬಿದ್ದು ಲಕ್ಷಾಂತರ ರೂ ನಷ್ಟ ಸಂಭವಿಸಿದ ಘಟನೆ ಅಮ್ಟಾಡಿ ಎಂಬಲ್ಲಿ ನಡೆದಿದೆ.
ಅಮ್ಟಾಡಿ ಗ್ರಾಮದ ಬೆದ್ರಗುಡ್ಡೆ ಎಂಬಲ್ಲಿ ಸಂಜೆ ಬಂದ ಗಾಳಿ ಮಳೆಗೆ ಮೋಹನ ಜೋಗಿ ಎಂಬವರ ಮನೆಗೆ ತೆಂಗಿನ ಮರ ಬಿದ್ದು ಸಂಪೂರ್ಣ ಜಖಂ ಆಗಿದ್ದು ಸುಮಾರು
2 ಲಕ್ಷ ರೂ ನಷ್ಟ ಉಂಟಾಗಿರಬಹುದು ಅಂದಾಜಿಸಲಾಗಿದೆ..
ಸ್ಥಳಕ್ಕೆ ಅಮ್ಟಾಡಿ ಗ್ರಾಮ ಲೆಕ್ಕಾಧಿಕಾರಿ ಶಶಿಕುಮಾರ್
ಸ್ಥಳ ಮಹಜರು ನಡೆಸಿದರು.