Sunday, April 14, 2024

*ಸೋತ ಸಿಂಹ*

ಸಿಂಹವೊಂದು ಜಂಭದಿಂದ
ಕಾಡಲೆಲ್ಲ ತಿರುಗಿ ತಿರುಗಿ
ಪ್ರಾಣಿ ಪಕ್ಷಿಗಳನು ಕಾಡಿ
ಕಾಡಿಗೆಲ್ಲ ತಾನೆ
ರಾಜನೆಂದು ಬೀಗಿತು

ಪ್ರಾಣಿ ಪಕ್ಷಿ ಎಲ್ಲ ಬೆದರಿ
ಅದನು ಕಂಡ ಒಡನೆ ಚೆದುರಿ
ಓಡಿ ಹೋಗಿ ಮರೆಯಲೆಲ್ಲ
ಅವಿತುಕೊಂಡು ತಮ್ಮ
ಪ್ರಾಣ ಉಳಿಸಿಕೊಂಡವು

ನಿತ್ಯ ನರಕ ತಾಳದಾಗೆ
ಎಲ್ಲ ಸೇರಿ ಸಭೆಯ ಮಾಡಿ
ಬುದ್ಧಿ ಕಲಿಸೊ ದಾರಿ ಸಿಗದೆ
ಒಳಗೊಳಗೇ ಉಸಿರು
ಹಾಕಿ ಚಿಂತೆಗೊಂಡವು

ಒಂದು ದಿನವು ಬಾಲವೆತ್ತಿ
ಸಿಂಹ ತಾನು ತಿರುಗುತಿರಲು
ನೊಣವು ಬಂದು ಮೇಲೆ ಕುಳಿತು
ಸಿಂಹವನ್ನು ಪ್ರೀತಿಯಿಂದ
ನೋಡತೊಡಗಿತು

ಅದರ ಧೈರ್ಯ ಕಂಡು ಸಿಂಹ
ಉರಿದು ಬಿದ್ದು ಬಾಲ ಬಡಿದು
ನೊಣವು ಚದುರುವಂತೆ ಮಾಡಿ
ಖುಷಿಯಪಟ್ಟು ಮುಂದೆ ಮುಂದೆ
ಸಾಗತೊಡಗಿತು

ಬಿಡದ ನೊಣವು ಮತ್ತೆ ಹಾರಿ
ಅದರ ಮುಖದ ಮೇಲೆ ಏರಿ
ರೆಕ್ಕೆ ಬಡಿದು ಸ್ವರವ ತೆಗೆದು
ಗುಂಯ್ ಗುಂಯ್ ರಾಗವನ್ನು
ಹಾಡತೊಡಗಿತು

ಸಿಟ್ಟಿಗೆದ್ದ ಸಿಂಹ ತಾನು
ತನ್ನ ಪಂಜದಿಂದ ಹೊಡೆದು
ಮುಖಕೆ ಗಾಯ ಮಾಡಿಕೊಂಡು
ಹಾರಿ ಹೋದ ನೊಣದ ಕಡೆಗೆ
ನೋಡತೊಡಗಿತು

ಮತ್ತೆ ಕುಳಿತ ನೊಣಕೆ ಬಿಡದೆ
ಮತ್ತೆ ಬಡಿದು ಮುಖದ ತುಂಬ
ಗಾಯ ಮಾಡಿಕೊಂಡು ತಾನು
ನೊಣಕೆ ಸೋತು ಸಪ್ಪೆ ಮೋರೆ
ಹಾಕಿಕೊಂಡಿತು

ಬಲವು ತನ್ನಲಿದೆಯು ಎಂಬ
ಹಮ್ಮು ಬಿಮ್ಮು ಬೇಡ ನಮಗೆ
ಎಲ್ಲರೊಡನೆ ಬೆರೆತು ನಾವು
ಹಾಡಿ ಕುಣಿದು ಜಗವ ನಗಿಸಿ
ಸೊಗದಿ ಬಾಳುವ

 

#ನೀ.ಶ್ರೀಶೈಲ ಹುಲ್ಲೂರು

More from the blog

ಲೋಕಸಭಾ ಚುನಾವಣೆ : ಮತಯಂತ್ರಗಳ ಕಮಿಷನಿಂಗ್‌ ಕಾರ್ಯ…. ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ಭೇಟಿ

ಬಂಟ್ವಾಳ :ಮೊಡಂಕಾಪಿನಲ್ಲಿರುವ ಇನ್ಫೆಂಟ್‌ ಜೀಸಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ದಿನ ಲೋಕಸಭಾ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ 205 ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಳಸಲಾಗುವ ಮತಯಂತ್ರಗಳ ಕಮಿಷನಿಂಗ್‌ ಕಾರ್ಯವು ನಡೆಯಿತು. ಈ ಸಂದರ್ಭದಲ್ಲಿ...

ಯುವಮೋರ್ಚಾ ಬಂಟ್ವಾಳ ವತಿಯಿಂದ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಬಿ. ಸಿ ರೋಡಿನ ರಕ್ತೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆ

ಯುವಮೋರ್ಚಾ ಬಂಟ್ವಾಳ ವತಿಯಿಂದ ನರೇಂದ್ರ ಮೋದಿ ಮತೊಮ್ಮೆ ಪ್ರಧಾನಿಯಾಗಲೆಂದು ರಕ್ತೇಶ್ವರಿ ದೇವಸ್ಥಾನ ಬಿ. ಸಿ ರೋಡಿನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ಆಯತಪ್ಪಿ ಬಾವಿಗೆ‌ ಬಿದ್ದ ಮಹಿಳೆ… ಅಗ್ನಿಶಾಮಕ ಸಿಬ್ಬಂದಿಗಳಿಂದ ರಕ್ಷಣೆ

ಮಂಗಳೂರು: ಬಾವಿಯಿಂದ ನೀರು ಸೇದುತ್ತಿದ್ದಾಗ ಆಯತಪ್ಪಿ ಬಾವಿಗೆ ಬಿದ್ದ ಮಹಿಳೆಯೋರ್ವರನ್ನು ಗುರುವಾರ ಕದ್ರಿ ಅಗ್ನಿಶಾಮಕ ಠಾಣೆಯವರು ರಕ್ಷಿಸಿದ್ದಾರೆ ಬಿಕ್ಕರ್ನಕಟ್ಟೆ ಸಮೀಪದ ನಿವಾಸಿ ಟ್ರೆಸ್ಸಿ ಡಿಸೋಜಾ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ರಕ್ಷಿಸಲ್ಪಟ್ಟ ಮಹಿಳೆ. ಸಂಜೆ 5 ಗಂಟೆ...

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರೆ..ಮಹಾರಥೋತ್ಸವ ಕಣ್ಣುಂಬಿಕೊಂಡ ಸಾವಿರಾರು ಭಕ್ತರು

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಎ. ೧೧ರಂದು ಸಂಜೆ ರಥೋತ್ಸವ ನಡೆಯಿತು. ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಮಹಾಪೂಜೆಯ ಬಳಿಕ ದೇವರು ರಥಾರೋಹಣಗೊಂಡು ಸಾಂಕೇತಿಕವಾಗಿ ರಥವನ್ನು ಎಳೆಯಲಾಯಿತು. ಮಧ್ಯಾಹ್ನ ರಥಕ್ಕೆ...