ಬಂಟ್ವಾಳ: ಸಜೀಪಮೂಡ ಶ್ರೀ ಸದಾಶಿವ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ದಿನಾಚರಣೆ ಹಾಗೂ ವಾರ್ಷಿಕ ಜಾತ್ರೋತ್ಸವವು ಬ್ರಹ್ಮಶ್ರೀ ನೀಲೇಶ್ವರ ಕೆ.ಯು. ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವೈಧಿಕ ವಿಧಿವಿಧಾನಗಳೊಂದಿಗೆ ನಡೆಯಿತು. ಧಾರ್ಮಿಕ ಕಾರ್ಯ ಕ್ರಮದ ಪ್ರಯುಕ್ತ ಪುಣ್ಯಾಹ,ಪಂಚಗವ್ಯ,ಗಣಹೋಮ,ಸಾನಿಧ್ಯ ಕಲಶಾಭಿಷೇಕ,ರುದ್ರಾಭಿಷೇಕ,ಪಂಚಾಮೃತ ಅಭಿಷೇಕ, ಅನ್ನದನ,ರಂಗಪೂಜೆ, ಭಜನೆ,ಅಷ್ಟವಧಾನ ಸೇವೆ,ವಿವಿಧ ವಿನೋದಾವಳಿ,ಸುಡುಮದ್ದು ಪ್ರದರ್ಶನ ನಡೆಯಿತು.ಇದೇವೇಳೆ ಪಾಕಶಾಸ್ತ್ರ ಪ್ರವೀಣ ಓಣಿ ಬೈಲು ಶಮಕರನಾರಾಯಣ ಐತಾಳ ಅವರನ್ನು ಸನ್ಮಾನಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸದಾನಂದ ಪೂಂಜಾ,ಎಂ.ಸುಬ್ರಹ್ಮಣ್ಯ ಭಟ್,ವಿಶ್ವನಾಥ ಬೆಳ್ಚಾಡ,ಕೆ.ಸದಾನಂದ ಶೆಟ್ಟಿ,ಜಯಶಂಕರ ಬಾಸ್ರಿತ್ತಾಯ,ರಮೇಶ್ ಸುವರ್ಣ,ಕುಸುಮ,ಕೆ.ಯೋಗೀಶ್ ಬೆಳ್ಚಾಡ,ದೇವಿಪ್ರಸಾದ್ ಪುಇಂಜಾ ಚಂದ್ರಹಾಸ, ಗಣೇಶಕಾರಂತ, ಗೀತಾ, ಹರೀಶ್ ಗಟ್ಟಿ, ಜಯಶೆಟ್ಟಿ ಮೊದಲಾದವರಿದ್ದರು.